Advertisement

BJP MLA Munirathna: ನನಗೇ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದರು

11:29 PM Sep 20, 2024 | Team Udayavani |

ರಾಮನಗರ: ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳ ಗಾಗಿರುವ ಬಿಜೆಪಿ ಶಾಸಕ ಮುನಿರತ್ನ, ಕಗ್ಗಲಿಪುರ ಠಾಣೆಯಲ್ಲಿ ಪೊಲೀಸರ ವಿಚಾರಣೆ ವೇಳೆ ನಾನು ಯಾವ ತಪ್ಪನ್ನೂ ಮಾಡಿಲ್ಲ, ನನಗೆ ಆ ಮಹಿಳೆ ಯಾರು ಎಂದು ಗೊತ್ತಿಲ್ಲ. ಇದೆಲ್ಲ ರಾಜಕೀಯ ಷಡ್ಯಂತ್ರ ಎಂದು ಹೇಳಿದ್ದಾರೆನ್ನಲಾಗಿದೆ. ನಾನು ಯಾರಿಗೂ ಹನಿಟ್ರ್ಯಾಪ್ ಮಾಡಿಲ್ಲ, ನನಗೇ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದರು.

Advertisement

ಮಹಿಳೆ ಆರೋಪಿಸಿರುವ ಬಗ್ಗೆ ಯಾವುದಾದರೂ ಸಾಕ್ಷ್ಯ ಇದ್ದರೆ ನೀಡಿ ಎಂದು ಆರೋಪಿ ಮುನಿರತ್ನ ಹೇಳಿಕೆ ನೀಡಿದ್ದಾರೆ ಎಂದು ಕೆಲ ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ಪ್ರಕರಣದ ಆರೋಪಿ ಮುನಿರತ್ನ ವೀರ್ಯ ಪರೀಕ್ಷೆಗೆ ಮಾದರಿ ನೀಡಲು ನಿರಾಕರಿಸಿದ್ದಾಗಿ ಮಾಹಿತಿ ಲಭ್ಯವಾಗಿದೆ. ಶುಕ್ರವಾರ ಪೊಲೀಸರು ದಯಾನಂದ ಸಾಗರ್‌ ಮೆಡಿಕಲ್‌ ಕಾಲೇಜಿನ ಆಸ್ಪತ್ರೆಯಲ್ಲಿ ಮುನಿರತ್ನ ಅವರನ್ನು ಪರೀಕ್ಷೆಗೆ ಕರೆತಂದಿದ್ದರು. ಆರೋಗ್ಯ ತಪಾಸಣೆ ಸಂದರ್ಭದಲ್ಲಿ ಮಾದರಿ ಸಂಗ್ರಹದ ವೇಳೆ ವೀರ್ಯದ ಮಾದರಿ ನೀಡಲು ಮುನಿರತ್ನ ನಿರಾಕರಿಸಿದ್ದಾರೆ ಎಂದೇ ನಮೂದಿಸಿಕೊಂಡು ಅವರ ಸಹಿ ಪಡೆದು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next