Advertisement

28 ದಿನದಲ್ಲಿ ಒಂದೇ ಒಂದು ಪ್ರಕರಣ ಕೊಡಗಿನಲ್ಲಿ ಪತ್ತೆಯಾಗಿಲ್ಲ,45 ಜಿಲ್ಲೆ ಸುರಕ್ಷಿತ: ಕೇಂದ್ರ

09:12 AM Apr 19, 2020 | Nagendra Trasi |

ನವದೆಹಲಿ: ದೇಶಾದ್ಯಂತ ಒಟ್ಟು 14,378 ಕೋವಿಡ್ 19 ವೈರಸ್ ಪ್ರಕರಣ ಶನಿವಾರದವರೆಗೆ ವರದಿಯಾಗಿದ್ದು, ಇದರಲ್ಲಿ ರಾಷ್ಟ್ರರಾಜಧಾನಿ ದಿಲ್ಲಿಯ ನಿಜಾಮುದ್ದೀನ್ ಮರ್ಕಝ್ ನಡೆದ ಒಂದೇ ಒಂದು ಧಾರ್ಮಿಕ ಸಭೆಯಿಂದ 4291 ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Advertisement

ಇಂದು ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ನೀಡಿರುವ ವಿವರದ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 991 ಕೋವಿಡ್ 19 ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 43 ಸಾವು ಸಂಭವಿಸಿದೆ. ಇದರೊಂದಿಗೆ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 14,378ಕ್ಕೆ ಏರಿಕೆಯಾದಂತಾಗಿದೆ. ದೇಶಾದ್ಯಂತ 480 ಜನರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಕಡಿಮೆಯಾಗುತ್ತಿದೆ. ಇದರಲ್ಲಿ ಮಾಹೆ, ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಕಳೆದ 28 ದಿನಗಳಲ್ಲಿ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ ಎಂದು ಹೇಳಿದರು. ಅಷ್ಟೇ ಅಲ್ಲ ಕಳೆದ 14 ದಿನಗಳಲ್ಲಿ 23 ರಾಜ್ಯಗಳ 45 ಜಿಲ್ಲೆಗಳಲ್ಲಿ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ. ನಮ್ಮ ಕ್ಷಿಪ್ರ ಕಾರ್ಯ ವಿಧಾನದಿಂದ ಪಾಸಿಟಿವ್ ಫಲಿತಾಂಶ ಪಡೆಯುವಂತಾಗಿದೆ ಎಂದು ತಿಳಿಸಿದ್ದಾರೆ.

ಕೇರಳದ ಕಾಸರಗೋಡಿನಲ್ಲಿ ಒಟ್ಟು ಪತ್ತೆಯಾದ 168 ಕೋವಿಡ್ ಪ್ರಕರಣದಲ್ಲಿ 113 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಸಮರ್ಪಕವಾದ ವೈದ್ಯಕೀಯ ಸೇವೆಯಿಂದಾಗಿ ಒಬ್ಬರೇ ಒಬ್ಬ ಸೋಂಕಿತ ಸಾವಿಗೀಡಾಗಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next