Advertisement

Odisha train ದುರಂತ ಸ್ಥಳದಲ್ಲಿ ದುರ್ನಾತ; ಕಾರಣ ಬಹಿರಂಗ

06:24 PM Jun 11, 2023 | Vishnudas Patil |

ಬಾಲಸೋರ್ : ಒಡಿಶಾದ ಬಾಲಾಸೋರ್ ನಲ್ಲಿ ರೈಲುಗಳ ಭೀಕರ ಅವಘಡ ಸಂಭವಿಸಿದ ಬಹನಾಗಾ ಬಜಾರ್ ಸ್ಥಳದಲ್ಲಿ ಕೆಟ್ಟ ದುರ್ನಾತ ಬೀರುತ್ತಿದ್ದು, ಸ್ಥಳದಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕಾರಣವೂ ಬಹಿರಂಗವಾಗಿದೆ.

Advertisement

288 ಮಂದಿ ಸಾವನ್ನಪ್ಪಿದ ಸುಮಾರು ಒಂದು ವಾರದ ನಂತರ, ರೈಲು ನಿಲ್ದಾಣದ ಬಳಿ ಸ್ಥಳೀಯರು ಹಾನಿಗೊಳಗಾದ ಕೋಚ್‌ನಿಂದ ಹೊರಸೂಸುವ ದುರ್ವಾಸನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರೈಲ್ವೇ ಅಧಿಕಾರಿಗಳು ಉತ್ತರವನ್ನು ನೀಡಿದ್ದು, ದುರ್ವಾಸನೆಗೆ ಕೊಳೆತ ಭಾರಿ ಪ್ರಮಾಣದ ಮೊಟ್ಟೆಗಳು ಕಾರಣವೆಂದು ಹೇಳಿದ್ದಾರೆ. ಮಾನವ ದೇಹಗಳಿಂದ ಈ ವಾಸನೆ ಬರುತ್ತಿರುವುದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾವು ಎರಡು ಬಾರಿ NDRF ನಿಂದ ಸ್ಥಳ ಪರಿಶೀಲನೆ ನಡೆಸಿ ವರದಿಪಡೆದಿದ್ದೇವೆ. ಯಶವಂತಪುರ-ಹೌರಾ ಎಕ್ಸ್‌ಪ್ರೆಸ್‌ನ ಪಾರ್ಸೆಲ್ ವ್ಯಾನ್‌ನಲ್ಲಿ ಸುಮಾರು ಮೂರು ಟನ್ ಮೊಟ್ಟೆಗಳನ್ನು ಸಾಗಿಸಲಾಗುತ್ತಿತ್ತು, ಅವುಗಳೆಲ್ಲ ಹಾಳಾಗಿ ಹೋಗಿವೆ ಎಂದು ಆಗ್ನೇಯ ರೈಲ್ವೆ ಸಿಪಿಆರ್‌ಒ ಆದಿತ್ಯ ಕುಮಾರ್ ಚೌಧರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next