Advertisement

Rourkela-Bhubaneswar: ವಂದೇ ಭಾರತ್‌ ರೈಲಿನ ಮೇಲೆ ಕಲ್ಲು ತೂರಾಟ

09:27 PM Nov 27, 2023 | Team Udayavani |

ಭುವನೇಶ್ವರ್‌: ರೂರ್ಕೆಲಾ - ಪುರಿ ನಡುವೆ ಸಂಚರಿಸುವ ವಂದೇ ಭಾರತ್‌ ರೈಲಿಗೆ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದಾರೆಂದು ಪೂರ್ವ ಕರಾವಳಿ ರೈಲ್ವೆ (ಇಸಿಒಆರ್‌) ಸೋಮವಾರ ತಿಳಿಸಿದೆ.

Advertisement

ಮೆರಮಂಡಲಿ-ಬುಧಪಾಂಕ್‌ ರೈಲ್ವೆ ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ. ಇದರಿಂದಾಗಿ ಯಾರಿಗೂ ಅಪಾಯ ಸಂಭವಿಸಿಲ್ಲ.

ಎಕ್ಸಿಕ್ಯೂಟಿವ್‌ ಕೋಚ್‌ನ ಕಿಟಕಿ ಗಾಜಿಗೆ ಕಲ್ಲುಬೀಸಲಾಗಿದ್ದು, ಗಾಜು ಪುಡಿಯಾಗಿದೆ. ಈ ಬಗ್ಗೆ ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಕಲ್ಲು ತೂರಾಟ ನಡೆಸುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಸ್ಥಳೀಯರನ್ನೂ ಎಚ್ಚರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next