Advertisement

ಒಡಿಶಾದ ಬಾಲಸೋರ್‌ನಲ್ಲಿ ನೋಟು ಕಾಗದದ ತಯಾರಿಕಾ ಕಾರ್ಖಾನೆ ಸ್ಥಾಪನೆ: ಸಿಎಂ ನವೀನ್‌ ಪಟ್ನಾಯಕ್‌

07:57 PM Jul 13, 2022 | Team Udayavani |

ಭುವನೇಶ್ವರ: ಒಡಿಶಾದ ಬಾಲಸೋರ್‌ನಲ್ಲಿ ಬ್ಯಾಂಕ್‌ ನೋಟುಗಳನ್ನು ಮುದ್ರಣ ಮಾಡುವ ಕಾಗದದ ತಯಾರಿಕಾ ಕಾರ್ಖಾನೆಯನ್ನು ಸ್ಥಾಪಿಸಲಾಗುತ್ತದೆ.

Advertisement

2,500 ಕೋಟಿ ರೂ. ಮೌಲ್ಯದ ಘಟಕವನ್ನು ಬ್ಯಾಂಕ್‌ ನೋಟ್‌ ಪೇಪರ್‌ ಇಂಡಿಯಾ ಪ್ರೈ.ಲಿ. ಸ್ಥಾಪಿಸಲಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಹೇಳಿದ್ದಾರೆ.

ಬ್ಯಾಂಕ್‌ ನೋಟ್‌ ಪೇಪರ್‌ ಇಂಡಿಯಾ ಪ್ರೈ.ಲಿ.ಯ ವ್ಯವಸ್ಥಾಪಕ ನಿರ್ದೇಶಕಿ ತೃಪ್ತಿ ಪಾತ್ರಾ ಘೋಷ್‌ ಅವರು ಬುಧವಾರ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಹೊಸ ಘಟಕಕ್ಕೆ ಎಲ್ಲ ರೀತಿಯ ನೆರವು ನೀಡಲಾಗುತ್ತದೆ ಎಂಬ ಭರವಸೆ ನೀಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next