Advertisement

ಸ್ವಾತಂತ್ರ್ಯ ಭಾಷಣ ಮಾಡುವಾಗ ಅಸ್ವಸ್ಥರಾದ ಒಡಿಶಾ ಸಿಎಂ, ಚೇತರಿಕೆ

12:15 PM Aug 15, 2017 | udayavani editorial |

ಭುವನೇಶ್ವರ : ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರಿಂದು ಬೆಳಗ್ಗೆ  ಸ್ವಾತಂತ್ರ್ಯದಿನದ ಭಾಷಣ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಅಸ್ವಸ್ಥರಾದರು. 

Advertisement

ಆದರೆ ಸಿಎಂ ಬಹುಬೇಗನೆ ಚೇತರಿಸಿಕೊಂಡರು ಎಂದು ಅವರೊಂದಿಗಿದ್ದ ಅಧಿಕಾರಿಗಳು ಹೇಳಿದರು. 

ವಾತಾವರಣದಲ್ಲಿನ ಶುಷ್ಕತೆಯಿಂದಾಗಿ ಮುಖ್ಯಮಂತ್ರಿಗಳು ಅಸ್ವಸ್ಥರಾದರು. ಆದರೆ ಅನಂತರ ಸುಧಾರಿಸಿದರು. ಈಗ ಅವರ ದೇಹಸ್ಥಿತಿ ಸಂಪೂರ್ಣವಾಗಿ ಚೆನ್ನಾಗಿದೆ. ಪ್ರಕೃತ ಅವರು ತಮ್ಮ ನಿವಾಸದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಅಧಿಕಾರಿ ತಿಳಿಸಿದ್ದಾರೆ. 

ಕಾರ್ಯಕ್ರಮ ಮುಗಿಸಿ ಮನೆಗೆ ಮರಳುವಾಗ ಮುಖ್ಯಮಂತ್ರಿಗಳು ಕ್ಯಾಪಿಟಲ್‌ ಹಾಸ್ಪಿಟಲ್‌ ಗೆ ಹೋದರು; ಅಲ್ಲಿ ವೈದ್ಯರು ಅವರನ್ನು ಪರೀಕ್ಷಿಸಿದರು. ಸಿಎಂ ಆರೋಗ್ಯ ಚೆನ್ನಾಗಿದೆ ಎಂದವರು ಹೇಳಿದರು ಎಂಬುದಾಗಿ ಮೂಲಗಳು ತಿಳಿಸಿವೆ.  

Advertisement

Udayavani is now on Telegram. Click here to join our channel and stay updated with the latest news.

Next