Advertisement

ಪೌಷ್ಟಿಕಾಂಶವುಳ್ಳ ಹಾಲು ವೃಥಾ ವ್ಯರ್ಥ ಮಾಡಬೇಡಿ

03:56 PM Aug 15, 2021 | Team Udayavani |

ಹಾವೇರಿ: ಹಾಲು ಪೌಷ್ಟಿಕಾಂಶ ಒಳಗೊಂಡಿದ್ದು,ಸಮೃದ್ಧತೆಯ ಸಂಕೇತವಾಗಿದೆ. ಅಂದಾಭಿಮಾನಕ್ಕೆಒಳಗಾಗಿ ಹಾಲನ್ನು ಹಾಳು ಮಾಡುವಬದಲು ಸಮಾಜದಲ್ಲಿ ಅಪೌಷ್ಟಿಕತೆಯಿಂದಬಳಲುವ ಮಕ್ಕಳಿಗೆ, ವೃದ್ಧಾಶ್ರಮದ ವೃದ್ಧರಿಗೆವಿತರಿಸಬೇಕೆಂದು ಮಾನವ ಬಂಧುತ್ವ ವೇದಿಕೆಜಿಲ್ಲಾ ಸಂಚಾಲಕ ಪ್ರಕಾಶ ಹಾದಿಮನಿಹೇಳಿದರು.

Advertisement

ಸ್ಥಳೀಯ ನಾಗೇಂದ್ರನಮಟ್ಟಿಯ ಶಕ್ತಿವೃದ್ಧಾಶ್ರಮದಲ್ಲಿ ಮಾನವ ಬಂಧುತ್ವ ವೇದಿಕೆಬಸವ ಪಂಚಮಿ ಪ್ರಯುಕ್ತ ಹಮ್ಮಿಕೊಂಡಿದ್ದಹಾಲುಣಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದರು.12ನೇ ಶತಮಾನದಲ್ಲಿ ಬಸವಣ್ಣನವರುಕಲ್ಲು ನಾಗರ ಕಂಡರೆ ಹಾಲನೆರವರು,

ದಿಟದನಾಗರ ಕಂಡರೆ ಕೊಲ್ಲೆಂಬರು ಉಂಬುವಜಂಗಮ ಬಂದರೆ ಮುಂದಕ್ಕೆ ಹೋಗೆಂಬರು,ಉಣದ ಲಿಂಗಕ್ಕೆ ಬೋನವ ಹಿಡಿವರು ಎಂದುಎಚ್ಚರಿಸಿದ್ದಾರೆ. ಆದರೆ, ಮೂಢ ನಂಬಿಕೆಗಳುಜನಮಾನಸದಲ್ಲಿ ಇಂಬು ಪಡೆದುಕೊಂಡಿವೆ.ಪ್ರತಿವರ್ಷ ಲಕ್ಷಾಂತರ ಲೀಟರ್‌ ಹಾಲನ್ನುವ್ಯರ್ಥ ಮಾಡುತ್ತಿರುವುದು ವಿಷಾದದ ಸಂಗತಿಎಂದರು.ಸಾಮಾಜಿಕ ಕಾರ್ಯಕರ್ತ ನಾಸೀರ್‌ಖಾನ್‌ಪಠಾಣ ಮಾತನಾಡಿ, ಅಪೌಷ್ಟಿಕತೆಯಿಂದಬಳಲುವ ಮಕ್ಕಳಿಗೆ, ವೃದ್ಧರಿಗೆ ಹಾಲುನೀಡಬೇಕು.

ಹಾಲು ವಿತರಣೆ ಕೇವಲ ಹಬ್ಬಗಳಿಗೆಸೀಮಿತವಾಗಬಾರದು. ಅಪೌಷ್ಟಿಕತೆಯಿಂದಬಳಲುವವರಿಗೆ ನಿರಂತರವಾಗಿ ಹಾಲು ವಿತರಿಸುವಕಾರ್ಯವಾಗಬೇಕು. ವೃದ್ಧಾಶ್ರಮದಲ್ಲಿರುವವರುಯಾರೂ ಅನಾಥರಲ್ಲ. ಅನಾಥರು ಎನ್ನುವಭಾವನೆಯನ್ನು ಮನಸ್ಸಿನಿಂದ ತೆಗೆಯಬೇಕು.ನಿಮ್ಮೊಂದಿಗೆ ನಾವಿದ್ದೇವೆ. ಸಮಾಜ ನಿಮ್ಮೊಂದಿಗಿದೆಎಂದು ತಿಳಿಸಿದರು.ಜಯಕರ್ನಾಟಕ ಸಂಘಟನೆ ರಾಜ್ಯ ಸಂಘಟನಾಕಾರ್ಯದರ್ಶಿ ರಮೇಶ ಆನವಟ್ಟಿ ಮಾತನಾಡಿ,ಹಬ್ಬಗಳ ಆಚರಣೆ ಆಡಂಬರವಾಗಬಾರದು.ಅರ್ಥಪೂರ್ಣವಾಗಬೇಕು.

ಹಬ್ಬಗಳ ಆಚರಣೆಅರ್ಥಪೂರ್ಣವಾಗದಿದ್ದರೆ ಹಬ್ಬಗಳಿಗೆಅರ್ಥವೇ ಇರುವುದಿಲ್ಲ. ಹಾಲು ಪೌಷ್ಟಿಕಾಂಶಒಳಗೊಂಡಿದ್ದು, ಅದನ್ನು ವ್ಯರ್ಥವಾಗಿ ಹಾಳುಮಾಡದೇ ಅಪೌಷ್ಟಿಕತೆಯಿಂದ ಬಳಲುವಮಕ್ಕಳಿಗೆ, ವಯೋವೃದ್ಧರಿಗೆ ನೀಡುವ ಮೂಲಕಮಾನವ ಬಂಧುತ್ವ ವೇದಿಕೆ ವಿದಾಯಕಕಾರ್ಯಕ್ರಮ ಹಮ್ಮಿಕೊಂಡಿರುವುದುಮಾದರಿಯಾಗಿದೆ ಎಂದರು.ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದಅಧ್ಯಕ್ಷ ಎನ್‌.ಎನ್‌.ಗಾಳೆಮ್ಮನವರಮಾತನಾಡಿ, ಸ್ಥಿತಿವಂತರು ವೃದ್ಧಾಶ್ರಮದಲ್ಲಿತಂದೆ-ತಾಯಿಯರನ್ನು ಬಿಟ್ಟಿರುವುದು ವಿಷಾದದಸಂಗತಿ.

Advertisement

ಹೆತ್ತವರ ಪರಿಶ್ರಮದಿಂದ ಬೆಳೆದುದೊಡ್ಡವರಾಗುವ ಮಕ್ಕಳು ಹೆತ್ತವರನ್ನು ಮುಪ್ಪಿನಕಾಲದಲ್ಲಿ ಮನೆಯಿಂದ ಹೊರಹಾಕಿರುವುದುನೋವಿನ ಸಂಗತಿ. ವೃದ್ಧಾಶ್ರಮದಲ್ಲಿರುವವರುಯಾರೂ ಸಹ ಅನಾಥರಲ್ಲ. ನಿಮ್ಮೊಂದಿಗೆನಾವಿದ್ದೇವೆ ಎಂದರು.ಮಾನವ ಬಂಧುತ್ವ ವೇದಿಕೆ ತಾಲೂಕುಸಂಚಾಲಕ ಮಾಲತೇಶ ಅಂಗೂರ ಮಾತನಾಡಿ,ಬಸವಾದಿ ಶರಣರು ವೈಜ್ಞಾನಿಕವಾಗಿ ಹಬ್ಬಗಳಆಚರಣೆಯನ್ನು ತಮ್ಮ ವಚನಗಳ ಮೂಲಕತಿಳಿಸಿಕೊಟ್ಟಿದ್ದಾರೆ.

ಜನರು ಪ್ರಜ್ಞಾವಂತಿಕೆಮೂಡಿಸಿಕೊಳ್ಳಬೇಕಿದೆ. ನಾಡಿನಾದ್ಯಂತ ಕಳೆದಹತ್ತಾರು ವರ್ಷಗಳಿಂದ ಬಸವಪಂಚಮಿಆಚರಣೆ ಮೂಲಕ ಮಕ್ಕಳಿಗೆ ಹಾಲುಣಿಸುವಕಾರ್ಯಕ್ರಮವನ್ನು ವೇದಿಕೆ ನಡೆಸಿಕೊಂಡುಬರುತ್ತಿದೆ. ಜನರು ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳುವಮೂಲಕ ಮೌಡ್ಯಗಳ ವಿರುದ್ಧ ಜಾಗೃತರಾಗಬೇಕುಎಂದರು.ಸಮಾರಂಭದಲ್ಲಿ ವಯೋವೃದ್ಧರಿಗೆ-ಮಕ್ಕಳಿಗೆಹಾಲು, ಬಗೆ ಬಗೆಯ ಉಂಡಿ ಹಾಗೂ ಬ್ರೆಡ್‌,ಹಣ್ಣುಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜಬಡಮ್ಮನವರ, ಜಗದೀಶ ಕನವಳ್ಳಿ, ಚಂದ್ರಹಾಸಕ್ಯಾತಣ್ಣನವರ, ಶಿವಬಸಪ್ಪ ಹಲಗಲಿ, ವೀರುಪಾಕ್ಷಪ್ಪಹತ್ತಿಮತ್ತೂರ, ಭೀಮರಾವ್‌ ಸಂಗೂರ,ಮಂಜುನಾಥ ಇಟಗಿ, ಪುಟ್ಟಪ್ಪ ಸವಣೂರು,ಉಮೇಶ ವಾಗ, ಈರಪ್ಪ ದೊಡ್ಡತಳವಾರ,ಶಿವಣ್ಣ ದೊಡ್ಡತಳವಾರ ಇತರರು ಹಾಜರಿದ್ದರು.ವೃದ್ಧಾಶ್ರಮದ ವ್ಯವಸ್ಥಾಪಕ ಕಾಳಪ್ಪ ಚಲವಾದಿವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next