Advertisement

ಅಡಿಕೆ ಕಳವು ಪ್ರಕರಣ: ಇಬ್ಬರ ಬಂಧನ

10:45 PM Aug 05, 2023 | Team Udayavani |

ಪುತ್ತೂರು : ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕಾವು ಅಮಿcನಡ್ಕ ನಿವಾಸಿಗಳಾದ ಕಿರಣ್‌ ಕುರ್ಮಾ, ಸಂತೋಷ್‌ ಬಂಧಿತ ಆರೋಪಿಗಳು. ಪ್ರಕರಣದ ಪ್ರಮುಖ ಆರೋಪಿ ಸಿನಾನ್‌ ಪರಾರಿಯಾಗಿದ್ದು ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮಾಟ್ನೂರು ಗ್ರಾಮದ ಅಮ್ಮಿನಡ್ಕದ ವಿಷ್ಣು ಕಲ್ಲುರಾಯ ಅವರ ಮನೆಯ ಉಗ್ರಾಣದಲ್ಲಿ ಶೇಖರಿಸಿಟ್ಟಿದ್ದ 2 ಕ್ವಿಂಟಾಲ್‌ ಅಡಿಕೆ ಮತ್ತು ಹುಲ್ಲು ಕತ್ತರಿಸುವ ಮೆಷಿನ್‌ ಕಳವು ಮಾಡಿದ್ದರು. ಆರೋಪಿಗಳನ್ನು ಬಂಧಿಸಿ ಸುಮಾರು ರೂ 51,000/- ಮೌಲ್ಯದ 1 ಕಿಂಟ್ವಾಲ್‌ 20 ಕೆಜಿ ಸುಲಿದ ಅಡಿಕೆ ಮತ್ತು ಸುಮಾರು ರೂ 5,000/-ಮೌಲ್ಯದ ಹುಲ್ಲು ಕತ್ತರಿಸುವ ಮೆಷಿನ್‌ ಹಾಗೂ ಕಳವು ಮಾಡಲು ಉಪಯೋಗಿಸಿದ ಆಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next