Advertisement

ಪುಣ್ಯಸ್ನಾನಕ್ಕೆ ನೂಕುನುಗ್ಗಾಟ: 6 ಸಾವು

03:45 AM Jan 16, 2017 | Team Udayavani |

ಕೊಚುಬೆರಿಯಾ (ಪ.ಬಂಗಾಳ): ಇಲ್ಲಿನ ಗಂಗಾ ಸಾಗರದಲ್ಲಿ ಮಕರ ಸಂಕ್ರಾಂತಿ ಪುಣ್ಯಸ್ನಾನದ ವೇಳೆ ನೂಕುನುಗ್ಗಾಟ ಸಂಭವಿಸಿ,  6 ಮೃತಪಟ್ಟಿದ್ದಾರೆ. ಎಲ್ಲ ಮೃತರು ಮಹಿಳೆಯರು.

Advertisement

ಪ್ರತಿಸಲದ ಸಂಕ್ರಾಂತಿಯಲ್ಲಿ ಇಲ್ಲಿನ ಬೂರಿಗಂಗಾ ನದಿಯಲ್ಲಿ ಎರಡು ದಿನ ಪುಣ್ಯ ಸ್ನಾನ ನಡೆಯುತ್ತದೆ. ಈ ವರ್ಷ 
16 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಸಂಜೆ 6 ಗಂಟೆಯ ವೇಳೆಗೆ ಭಕ್ತರ ಪ್ರವಾಹ ಅಧಿಕಗೊಂಡಿದ್ದರಿಂದ, ಕೋಲ್ಕ¤ಗೆ ಮರಳುವ ಅವಸರದಲ್ಲಿ, ಆರು ಮಂದಿ ನೀರುಪಾಲಾಗಿ ಈ ದುರ್ಘ‌ಟನೆ ಸಂಭವಿಸಿದೆ.  

ಅವಘಡಕ್ಕೀಡಾದ ಹಲವರನ್ನು ಪತ್ತೆಹಚ್ಚಲು ನೌಕಾದಳದ ಸಿಬ್ಬಂದಿಯ ಶೋಧಾ ಕಾರ್ಯ ಭರದಿಂದ ಸಾಗಿದೆ. ಸಾವಿನ ಸಂಖ್ಯೆ ಏರುವ ಭೀತಿಯೂ ಇದೆ. ಈ ನಡುವೆ, ಘಟನೆ ಬಗ್ಗೆ ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿ ಸಿದ್ದು, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next