ಕೊಚುಬೆರಿಯಾ (ಪ.ಬಂಗಾಳ): ಇಲ್ಲಿನ ಗಂಗಾ ಸಾಗರದಲ್ಲಿ ಮಕರ ಸಂಕ್ರಾಂತಿ ಪುಣ್ಯಸ್ನಾನದ ವೇಳೆ ನೂಕುನುಗ್ಗಾಟ ಸಂಭವಿಸಿ, 6 ಮೃತಪಟ್ಟಿದ್ದಾರೆ. ಎಲ್ಲ ಮೃತರು ಮಹಿಳೆಯರು.
ಪ್ರತಿಸಲದ ಸಂಕ್ರಾಂತಿಯಲ್ಲಿ ಇಲ್ಲಿನ ಬೂರಿಗಂಗಾ ನದಿಯಲ್ಲಿ ಎರಡು ದಿನ ಪುಣ್ಯ ಸ್ನಾನ ನಡೆಯುತ್ತದೆ. ಈ ವರ್ಷ
16 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಸಂಜೆ 6 ಗಂಟೆಯ ವೇಳೆಗೆ ಭಕ್ತರ ಪ್ರವಾಹ ಅಧಿಕಗೊಂಡಿದ್ದರಿಂದ, ಕೋಲ್ಕ¤ಗೆ ಮರಳುವ ಅವಸರದಲ್ಲಿ, ಆರು ಮಂದಿ ನೀರುಪಾಲಾಗಿ ಈ ದುರ್ಘಟನೆ ಸಂಭವಿಸಿದೆ.
ಅವಘಡಕ್ಕೀಡಾದ ಹಲವರನ್ನು ಪತ್ತೆಹಚ್ಚಲು ನೌಕಾದಳದ ಸಿಬ್ಬಂದಿಯ ಶೋಧಾ ಕಾರ್ಯ ಭರದಿಂದ ಸಾಗಿದೆ. ಸಾವಿನ ಸಂಖ್ಯೆ ಏರುವ ಭೀತಿಯೂ ಇದೆ. ಈ ನಡುವೆ, ಘಟನೆ ಬಗ್ಗೆ ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿ ಸಿದ್ದು, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ.