Advertisement

Sirsi: ಏಕಾಂಗಿಯಾಗಿ ತೋಡಿದ್ದ ಬಾವಿಗೆ ಕಟ್ಟೆ ಕಟ್ಟಿದ ಗೌರಿ

10:37 PM Apr 04, 2024 | Team Udayavani |

ಶಿರಸಿ: “ಗಂಗೆ ಗೆದ್ದ ಗೌರಿ’ ಎಂದೇ ಹೆಸರು ಮಾಡಿದ ಸಾಹಸಿ ಮಹಿಳೆ ಗೌರಿ ನಾಯ್ಕ  ಅವರು ಅಂಗನವಾಡಿ ಮಕ್ಕಳಿಗೆ ಏಕಾಂಗಿಯಾಗಿ ಬಾವಿ ತೋಡಿದ ಬೆನ್ನಲ್ಲೇ, ಆ ಬಾವಿಗೆ ಸ್ವತಃ ಕಟ್ಟೆಯನ್ನೂ ಕಟ್ಟಿದ್ದಾರೆ.

Advertisement

ಗಣೇಶನಗರ ಅಂಗನವಾಡಿ ಹಿಂಬದಿಯಲ್ಲಿ ಗೌರಿ ನಾಯ್ಕ 33 ದಿನಗಳ ನಿರಂತರ ಶ್ರಮದಿಂದ 5 ಅಡಿ ಅಗಲ, 45 ಅಡಿ ಆಳ ತೋಡಿದ ಬಾವಿಗೆ ಕಟ್ಟೆ ನಿರ್ಮಿಸಿದ್ದಾರೆ. ಈ ಬಾವಿ ಅಪಾಯಕ್ಕೆ ಕಾರಣವಾಗಬಾರದು ಎಂದು 3 ಅಡಿ ಎತ್ತರ ಕಟ್ಟೆಯನ್ನೂ ಸ್ವತಃ ನಿರ್ಮಿಸಿದ್ದಾರೆ. ಸುಮಾರು ಹತ್ತು ದಿನಕ್ಕೂ ಹೆಚ್ಚು ಕಾಲ ಶ್ರಮವಹಿಸಿ ಈ ಕಾರ್ಯ ಪೂರೈಸಿದ್ದಾರೆ. ಬಾವಿಯೊಳಗೆ ಕಸ ಬೀಳದಂತೆ ಕಬ್ಬಿಣದ ಬೇಲಿಯನ್ನೂ ಹಾಕಿದ್ದಾರೆ. ಕಟ್ಟೆ ಕಟ್ಟಲು ಸಮೀಪದ ತನ್ನ ಮನೆಯಲ್ಲಿದ್ದ ನೂರಾರು ಕೆಂಪು ಕಲ್ಲನ್ನು ಒಬ್ಬರೇ ಹೊತ್ತು ತಂದು ಅಚ್ಚುಕಟ್ಟಾಗಿ ಜೋಡಿಸಿದ್ದಾರೆ. ಸಿಮೆಂಟ್‌ ಕಾರ್ಯಕ್ಕೆ ಸ್ಥಳೀಯರ ನೆರವು ಪಡೆದಿದ್ದಾರೆ. ಮಕ್ಕಳಿಗೆ ಅಪಾಯ ಆಗದಂತೆ ಗೋಡೆ ಕಟ್ಟಿದ್ದು ಖುಷಿಯಾಗಿದೆ. ಬಾವಿ ಕೂಡ ಪೂರ್ಣವಾದಂತೆ ಆಗಿದೆ ಎಂದು ಗೌರಿ ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next