Advertisement

ಕೆನಡಾದಲ್ಲಿ ಕರಾಟೆ ವಿಚಾರ ಸಂಕಿರಣ ನಡೆಸಿದ  ಚೀತಾ ಯಜ್ಞೆಶ್ ಶೆಟ್ಟಿ

04:41 PM Jun 16, 2017 | |

ಮುಂಬಯಿ: ಕರಾಟೆ-ಜೂಡೋ ಕಲೆಗಳ ಹೆಸರಾಂತ ಮಾಸ್ಟರ್‌ ತಜ್ಞ ಹಾಗೂ ಚಿತಾಹ್‌ ಜೀತ್‌ ಕುಣೆಡೂ ಗ್ಲೋಬಲ್‌ ನ್ಪೋರ್ಟ್ಸ್ ಫೌಂಡೇಶನ್‌ ಇದರ ಅಧ್ಯಕ್ಷ ಚಿತಾಹ್‌ ಯಜ್ನೆಶ್‌ ಶೆಟ್ಟಿ ಅವರು ಇತ್ತೀಚೆಗೆ ಕೆನಡಾದಲ್ಲಿ 25 ದಿನ ಕರಾಟೆ ಕಲೆಗಳ ವಿಚಾರ ಸಂಕಿರಣ ನಡೆಸುವುದರ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನೀಡಿ ಮುಂಬಯಿಗೆ ಆಗಮಿಸಿದ್ದಾರೆ.

Advertisement

ಕರಾಟೆ ಕಲೆಗಳ ವಿಚಾರ ಸಂಕಿರಣ ನಡೆಸಲು ಮತ್ತು ಮಹಿಳೆಯರ ಸ್ವ-ರಕ್ಷಣೆ ಕುರಿತಾಗಿ ಕೆನಡಾ ನಾಗರಿಕರಿಗೆ ತರಬೇತಿ ನೀಡಲು ಕೆನಡಾದಲ್ಲಿರುವ ಸೌಥ್‌ ಏಶಿಯಾ ಡೆವಲಪಮೆಂಟ್‌ ಆ್ಯಂಡ್‌ ಮೆಂಬರ್‌ಶಿಪ್‌ ಗ್ರೋಥ್‌ ಸಂಸ್ಥೆಯ ನಿರ್ದೇಶಕ ಗುಲಾಬ್‌ ಸಿಂಗ್‌ ಸೈನಿ ಅವರು ಶೆಟ್ಟಿ ಅವರಿಗೆ ಕೆನಡಾಕ್ಕೆ ಆಹ್ವಾನಿಸಿದ್ದರು.

ಗುಲಾಬ್‌ ಸಿಂಗ್‌ ಅವರ ಆಹ್ವಾನದ ಮೇರೆಗೆ ಇತ್ತೀಚೆಗೆ ಕೆನಡಾಕ್ಕೆ ತೆರಳಿದ ಚಿತಾಹ್‌ ಯಜ್ನೆàಶ್‌ ಶೆಟ್ಟಿ ಅವರು ಅಲ್ಲಿನ ಮಿಸ್ಸಿಸೌಗಾ ಮತ್ತು ಓಂಟಾರಿಯೋ ನಗರಗಳಲ್ಲಿ ಕರಾಟೆ ಕಲೆಗಳ ವಿಚಾರ ಸಂಕಿರಣ ನಡೆಸಿ ಅಲ್ಲಿನ  ನಾಗರಿಕರಿಗೆ ಕರಾಟೆ ಕಲೆಯ ವಿವಿಧ ರೂಪಗಳ ಮೂಲಕ ಸ್ವ-ರಕ್ಷಣೆ 

ಹೇಗೆ ಮಾಡಿ ಕೊಳ್ಳಬೇಕೆಂಬ ಕಲೆಯನ್ನು ಕಲಿಸಿದರು. ಅಲ್ಲದೆ, ಕರಾಟೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದರು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next