Advertisement

N R Pura: 17 ಕಾಡಾನೆಗಳ ಹಿಂಡು ಕಂಡು ಬೆಚ್ಚಿ ಬಿದ್ದ ಜನತೆ

03:54 PM Feb 18, 2024 | Team Udayavani |

ಚಿಕ್ಕಮಗಳೂರು : ಎನ್.ಆರ್.ಪುರದ ಜನರು 17 ಕಾಡಾನೆಗಳ ಹಿಂಡು ಕಂಡು ಆತಂಕಕ್ಕೊಳಗಾಗಿದ್ದು ಸದ್ಯ ಭದ್ರಾ ಹಿನ್ನೀರು ದಾಟಿ, ಕಾಡಂಚಿನ ತೋಟಗಳಲ್ಲಿ ಆನೆಗಳು ಬೀಡು ಬಿಟ್ಟಿವೆ.

Advertisement

ಕಳೆದೊಂದು ತಿಂಗಳಿಂದ ಆನೆ ಹಾವಳಿ ತೀವ್ರವಾಗಿದ್ದು ಜನರು ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಹಳುವಳ್ಳಿ ಎಂಬ ಹಳ್ಳಿಯ ಜನರೇ ಸೇರಿ ಬೇಲಿ ನಿರ್ಮಾಣ ಮಾಡಿಕೊಂಡಿದ್ದಾರೆ. ಭದ್ರಾ ನದಿಯಲ್ಲಿ ನೀರು ಕಡಿಮೆಯಾಗಿರುವ ಕಾರಣ ಆನೆಗಳು ನದಿ ದಾಟಿ ಗ್ರಾಮಗಳತ್ತ ಬರುತ್ತಿವೆ. ನಿತ್ಯವೂ ಒಂದೊಂದು ಹಳ್ಳಿಯಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿದೆ. ಆನೆಗಳು ಕಾಣಿಸಿಕೊಂಡಿರುವ ಹಳುವಳ್ಳಿಯಿಂದ ಎನ್.ಆರ್.ಪುರ ತಾಲೂಕು ಕೇಂದ್ರಕ್ಕೆ ಒಂದು ಕಿ.ಮೀ. ದೂರವಿದ್ದು ತಾಲೂಕು ಕೇಂದ್ರಕ್ಕೆ ಲಗ್ಗೆ ಇಡುವ ದಿನ ದೂರವಿಲ್ಲ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ಪಟಾಕಿ ಸಿಡಿಸಿದರೂ ಅಂಜದ ದ ಕಾಡಾನೆಗಳು ಈಗಾಗಲೇ ನೂರಾರು ಎಕರೆ ಅಡಿಕೆ, ತೆಂಗು, ಬಾಳೆ, ಭತ್ತದ ಕೃಷಿಯನ್ನು ನಾಶ ಮಾಡಿವೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರಕ್ಷಣೆ ಒದಗಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next