Advertisement

ರಾಹುಲ್‌, ವೇಣು, ದಿನೇಶ್‌  ಸಹಿತ ಐವರಿಗೆ ನೋಟಿಸ್‌

09:20 AM Dec 17, 2018 | Team Udayavani |

ಬೆಳಗಾವಿ: ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಾಂಗ್ರೆಸ್‌ ಭವನಕ್ಕಾಗಿ ಸಂಗ್ರಹಿಸಿರುವ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿಗೆ ಕಾನೂನು ನೋಟಿಸ್‌ ನೀಡಲು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ತಿಳಿಸಿದರು. ಭವನ ಕಟ್ಟಲು ನಾನು ವೈಯಕ್ತಿಕವಾಗಿ ನೀಡಿದ್ದ ಹಣದಲ್ಲಿ 7.50 ಲ. ರೂ. ಕೊಡಬೇಕಾಗಿದೆ. ಹೀಗಾಗಿ ಐವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದವರು ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next