Advertisement

ಎಚ್‌ಡಿಕೆ ಪ್ರಣಾಳಿಕೆಗೆ ಕಿಮ್ಮತ್ತಿಲ್ಲ: ಶೆಟ್ಟರ್‌

07:00 AM Jul 23, 2018 | Team Udayavani |

ಹುಬ್ಬಳ್ಳಿ: ಚುನಾವಣೆಗೆ ಮುನ್ನ ಜೆಡಿಎಸ್‌ ನೀಡಿದ ಪ್ರಣಾಳಿಕೆಗೆ ಯಾವುದೇ ಮಹತ್ವ ಇಲ್ಲ ಎಂಬುದನ್ನು ಕುಮಾರಸ್ವಾಮಿ ಅವರೇ ಸಾಬೀತು ಪಡಿಸಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ವ್ಯಂಗ್ಯವಾಡಿದರು. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಣೆ, ವೃದಾಟಛಿಪ್ಯ ವೇತನ 600 ರಿಂದ 6 ಸಾವಿರಕ್ಕೆ ಏರಿಕೆ, ರೈತರ ಸಾಲ ಮನ್ನಾ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಣಾಳಿಕೆಯಲ್ಲಿ ಹೇಳಿದ್ದರು. ಆದರೆ ಯಾವುದೇ ವಿಷಯವನ್ನು ಈಡೇರಿಸದೇ ಪ್ರಣಾಳಿಕೆಗೆ ಕಿಮ್ಮತ್ತಿಲ್ಲದಂತೆ ಮಾಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next