Advertisement

ನೋಟು ನಿಷೇಧದಿಂದ ಏನು ಸಾಧಿಸಿದ್ದೀರಿ? ಪ್ರಧಾನಿ ಮೋದಿಗೆ ರಾಹುಲ್

06:25 PM Aug 30, 2018 | Sharanya Alva |

ನವದೆಹಲಿ: ನೋಟು ಅಮಾನ್ಯೀಕರಣ ಕ್ರಮ ತಪ್ಪಲ್ಲ, ಆದರೆ ದೊಡ್ಡ ಬಂಡವಾಳಶಾಹಿ ಕುಳಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಜನಸಾಮಾನ್ಯರು ಕಷ್ಟ ಅನುಭವಿಸುವಂತಾಯಿತು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ನೋಟು ನಿಷೇಧ ಇದೊಂದು ದೊಡ್ಡ ಹಗರಣಕ್ಕಿಂತ ಕಡಿಮೆಯೇನಲ್ಲ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ ಅವರು, ಆರ್ ಬಿಐನ ವಾರ್ಷಿಕ ವರದಿ ಪ್ರಕಾರ, 2016ರ ನವೆಂಬರ್ 8ರಂದು ಪ್ರಧಾನಿ ಮೋದಿ ಅವರು ನಿಷೇಧಿಸಿದ್ದ 500 ರೂ. ಹಾಗೂ 1000 ರೂಪಾಯಿ ನೋಟುಗಳು ಶೇ.99ರಷ್ಟು ವಾಪಸ್ ಬಂದಿರುವುದಾಗಿ ತಿಳಿಸಿದೆ.

ಈ ತಪ್ಪಿಗಾಗಿ ನೀವು (ಪ್ರಧಾನಿ) ಕ್ಷಮೆ ಕೇಳಬೇಕಿತ್ತು. ಆದರೆ ಪ್ರಧಾನಿ ಮೋದಿ ಅವರು ಅದನ್ನು ತುಂಬಾ ಬುದ್ಧಿವಂತಿಕೆಯಿಂದ ನುಣುಚಿಕೊಂಡಿದ್ದಾರೆ ಎಂದು ಹೇಳಿದರು.

ನೋಟು ನಿಷೇಧದಿಂದ ಕಪ್ಪು ಹಣ ಹೊರತರಲು ಹಾಗೂ ಭ್ರಷ್ಟಾಚಾರ ಮಟ್ಟಹಾಕಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ವಿಶ್ಲೇಷಿಸಿತ್ತು. ಆದರೆ 2016ರ ನವೆಂಬರ್ 8ರಂದು 15.41 ಲಕ್ಷ ಕೋಟಿ ರೂ.ಮೌಲ್ಯದ 500, 1000 ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಅವುಗಳಲ್ಲಿ 15.31 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ವಾಪಸ್ ಬಂದಿದೆ. ಅಂದರೆ 10, 720 ಕೋಟಿ ರೂ. ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಾಸ್ಸಾಗಿಲ್ಲ. ಇದರಿಂದ ಕೇಂದ್ರ ಸರ್ಕಾರ ಏನು ಸಾಧಿಸಿದಂತಾಗಿದೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ. ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ ಸ್ಥಿತಿ ಹಳಿ ತಪ್ಪಿದಂತಾಗಿದೆ ಎಂದು ರಾಹುಲ್ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next