Advertisement

ಶಾಯಿರಿ ಪ್ರಕಾರ ಹೆಚ್ಚಳವೇ ಇಟಗಿ ಈರಣ್ಣಗೆ ನುಡಿಕಾಣಿಕೆ

01:09 PM Mar 27, 2017 | |

ದಾವಣಗೆರೆ: ಕನ್ನಡದಲ್ಲಿ ಶಾಯಿರಿ ಪ್ರಕಾರವನ್ನು ಇನ್ನೂ ಹೆಚ್ಚು ಸದೃಢಗೊಳಿಸುವ ಮೂಲಕ ಕನ್ನಡದ ಶಾಯಿರಿ ಕವಿ ಇಟಗಿ ಈರಣ್ಣ ಅವರಿಗೆ ನುಡಿಕಾಣಿಕೆ ಸಲ್ಲಿಸಬೇಕು ಎಂದು ಕವಿ ಚಂದ್ರಶೇಖರ ತಾಳ್ಯ ತಿಳಿಸಿದ್ದಾರೆ. 

Advertisement

ಭಾನುವಾರ ರೋಟರಿ ಬಾಲಭವನದಲ್ಲಿ ಹರಪನಹಳ್ಳಿಯ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ, ದಾವಣಗೆರೆಯ ಪ್ರಗತಿಪರ ಸಾಹಿತ್ಯ ಪರಿಷತ್ತು ಮತ್ತು ಕಾವ್ಯ ಮಂಡಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡದ ಶಾಯಿರಿ ಕವಿ ಇಟಗಿ ಈರಣ್ಣ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಟಗಿ ಈರಣ್ಣ ಅವರು ನಿಜಕ್ಕೂ ಕನ್ನಡ ಸಾರಸ್ವತ ಲೋಕಕ್ಕೆ ತಕ್ಕುದಾದ ಶಾಯಿರಿ ಕವಿ ಆಗಿದ್ದರು. ಶಾಯಿರಿ ರಚನೆ ಹೆಚ್ಚಿಸುವ ಮೂಲಕ ಅವರಿಗೆ ನಿಜ ಅರ್ಥದಲ್ಲಿ ನುಡಿಕಾಣಿಕೆ ಸಲ್ಲಿಸಬೇಕೆಂದು ತಿಳಿಸಿದರು. ಕನ್ನಡಕ್ಕೆ ಅರೇಬಿಕ್‌ ಮೂಲದಿಂದ ಶಾಯಿರಿ ಪ್ರಾಕಾರ ಬಂದಿದೆ. ಅಂತಹ ಶಾಯಿರಿಯನ್ನು ಕವಿಗೋಷ್ಠಿಯಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. 

ಈಗಂತೂ ಕವಿಗೋಷ್ಠಿ ಎಂದರೆ ತೀರಾ ಸಪ್ಪೆ, ನಿರಾಸೆ ಮೂಡಿಸುವಂತಿರುತ್ತವೆ. ಓದುಗರು ಮತ್ತು ಕೇಳುಗರಲ್ಲಿ ಇರುಸು ಮುರುಸು ಉಂಟು ಮಾಡುವಂತಿರುತ್ತವೆ. ಅಂತಹ ಕಡೆ ಶಾಯಿರಿ ಬಳಸಬೇಕು. ಶಾಯಿರಿ ಕನ್ನಡ ಸಾಹಿತ್ಯ ಲೋಕಕ್ಕೆ ಬೆಳಕಿನಂತಿವೆ ಎಂದು ಅಭಿಪ್ರಾಯಪಟ್ಟರು. ಹಳೆಗನ್ನಡ ಮತ್ತಿತರ ಕಡೆ ಶಾಯಿರಿ ಇರಲಿಲ್ಲ.

ಇದ್ದರೂ ಹೆಚ್ಚಿನ ಮಟ್ಟದಲ್ಲಿ ಬೆಳಕಿಗೆ ಬಂದಿಲ್ಲ. ನವೋದಯ ಕಾವ್ಯ ಪ್ರಚಲಿತಕ್ಕೆ ಬಂದ ನಂತರ ಹೆಚ್ಚಾಗಿ ಶಾಯಿರಿ ಕಂಡು ಬಂದವು. ಎಲ್ಲಾ ಕಮ್ಮಟದಂತೆ ಶಾಯಿರಿ ಕಮ್ಮಟ ಏರ್ಪಡಿಸುವ ಮೂಲಕ ಹೊಸ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು. 

Advertisement

ಸಂತೇಬೆನ್ನೂರಿನ ಯುವ ಕವಿ ಸಂತೆಬೆನ್ನೂರು ಫೈಜ°ಟ್ರಾಜ್‌ ಮಾತನಾಡಿ, ಕನ್ನಡದ ಶಾಯಿರಿ ಕವಿ ಇಟಗಿ ಈರಣ್ಣ ಅವರಿಗೆ ಅತಿ ಸರಳವಾದ ಮಾತಿನಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿ, ಹೇಳುವಂತಹ ಶಕ್ತಿ ಇತ್ತು. ಸಾಹಿತ್ಯ ವಲಯದಲ್ಲಿ ಈ ರೀತಿಯ ನೆನಪು ಕಾರ್ಯಕ್ರಮಗಳ ಮೂಲಕ ಅವರ ಸಾಹಿತ್ಯ ಸೇವೆಯನ್ನು ಸ್ಮರಿಸುವುದು ಒಳ್ಳೆಯ ಕಾರ್ಯ.

ಸಾಂಸ್ಕೃತಿಕ ವಲಯದಲ್ಲಿ ಇಂತದ್ದು ಸದಾ ಕಾಡಬೇಕು ಎಂದು ಬಯಸಿದರು. ಇಟಗಿ ಈರಣ್ಣ ಅವರಗಿಂತಲೂ ಮುಂಚೆಯೇ ಈ.ಗೋ. ದುಂಡೆಪ್ಪ, ಕೆಸಿಕೆ, ಆರ್‌. ಎನ್‌. ಕುಬೇರಪ್ಪ ಮುಂತಾದವರು ಶಾಯಿರಿ ರಚಿಸಿದ್ದರು. ಪಾಟೀಲಪ್ಪ ಅವರಿಂದ ಶಾಯಿರಿ ಹುಚ್ಚು ಬೆಳೆಸಿಕೊಂಡಂತಹ ಈರಣ್ಣ ಅವರು ಉತ್ತರ ಕರ್ನಾಟಕದ  ಗಂಡುಮೆಟ್ಟಿನ ಭಾಷೆಯನ್ನು ಚೆನ್ನಾಗಿ ದುಡಿಸಿಕೊಳ್ಳುವ ಮೂಲಕ ಕನ್ನಡ ಲೋಕಕ್ಕೆ ಶಾಯಿರಿ ಕಾಣಿಕೆ ನೀಡಿದರು ಎಂದು ಸ್ಮರಿಸಿದರು. 

ವಿಶ್ರಾಂತ ಪ್ರಾಚಾರ್ಯ ಪ್ರೊ| ಎಚ್‌.ಎ. ಭಿಕ್ಷಾವರ್ತಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಎಸ್‌.ಎಚ್‌. ಹೂಗಾರ್‌, ಹರಪನಹಳ್ಳಿ ಉಪನ್ಯಾಸಕ ಎಚ್‌. ಮಲ್ಲಿಕಾರ್ಜುನ್‌, ಪ್ರಗತಿಪರ ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ. ಮುದ್ದುವೀರಸ್ವಾಮಿ ಹಿರೇಮಳಲಿ, ಕಾವ್ಯ ಮಂಡಳ ಕಾರ್ಯದರ್ಶಿ ನಾಗರಾಜ ಸಿರಿಗೆರೆ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next