Advertisement

‘ಸ್ವಾರ್ಥಕ್ಕಾಗಿ ಪರಿಸರದ ಬಳಕೆ ಸಲ್ಲದು’

12:32 PM Jun 06, 2018 | Team Udayavani |

ಕಟೀಲು : ಮಾನವನ ಸ್ವಾರ್ಥ ಲಾಲಾಸೆಯಿಂದ ಪರಿಸರದವನ್ನು ತನಗೆ ಇಷ್ಟಬಂದತೆ ಉಪಯೋಗಿಸುವುದರ
ಮೂಲಕವಾಗಿ ಇಂದು ನಾವು ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಹಂತಕ್ಕೆ ತಲುಪಿದ್ದೇವೆ ಎಂದು ಕಟೀಲು
ದೇಗುಲದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಹೇಳಿದರು.

Advertisement

ಅವರು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ.ಪೂ. ಕಾಲೇಜಿನ ಪ್ರೌಢಶಾಲೆಯ ವಿಭಾಗದಿಂದ ಪರಿಸರ ದಿನಾಚರಣೆ ಮತ್ತು ಪರಿಸರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲ್ಯಾನ್‌ ಕೊಂಡೇಲ ಮಾತನಾಡಿದರು. ಮಕ್ಕಳಿಗೆ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಸೋಮಪ್ಪ ಅಲಂಗಾರ್‌, ರಾಜಶೇಖರ್‌ ಮತ್ತಿತರರು ಇದ್ದರು. ಹರೀಶ್‌ ನಿರೂಪಿಸಿದರು, ವಸಂತ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next