Advertisement

ಭಾರತ ವಿರೋಧಿ ಶಕ್ತಿಗಳಿಗಿಲ್ಲ ಬೆಂಬಲ

12:30 AM Mar 12, 2019 | Team Udayavani |

ಹೊಸದಿಲ್ಲಿ/ಢಾಕಾ: ಭಾರತದ ವಿರುದ್ಧದ ಯಾವುದೇ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಭರವಸೆ ನೀಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ಬಾಂಗ್ಲಾದೇಶ ಸರಕಾರ ಭಯೋತ್ಪಾದಕರ ವಿರುದ್ಧ “ಶೂನ್ಯ ಸಹನೆ ನೀತಿ’ ಅನುಸರಿಸುತ್ತಿದ್ದು, ಇದರನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. 

Advertisement

ಹರಡುತ್ತಿರುವ ತೀವ್ರಗಾಮಿತ್ವ ನಿಜಕ್ಕೂ ಸವಾಲಿನದ್ದಾಗಿದೆ ಎಂದು ಪ್ರತಿಪಾದಿಸಿರುವ ಹಸೀನಾ, ಇದು ಎರಡು ದೇಶಗಳಿಗೆ ಮಾತ್ರವಲ್ಲ, ಇಡೀ ದಕ್ಷಿಣ ಏಷ್ಯಾಕ್ಕೆ ಬೆದರಿಕೆ ಹುಟ್ಟಿಸುವ ವಿಚಾರ ಎಂದು ಹೇಳಿದ್ದಾರೆ. ಇದೇ ವೇಳೆ ಪುಲ್ವಾಮಾ ದಾಳಿಯನ್ನೂ ಅವರು ಖಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next