Advertisement

ಪಾಕಿಸ್ಥಾನಕ್ಕೆ ತೆರಳಲು ಸಿಕ್ಖ್ರಿಗಿಲ್ಲ ಅನುಮತಿ

07:36 AM Jun 16, 2019 | mahesh |
ಹೊಸದಿಲ್ಲಿ: ಪಾಕಿಸ್ಥಾನದಲ್ಲಿ ಸಿಕ್ಖ್ರ 5ನೇ ಗುರು ಅರ್ಜನ್‌ ದೇವ್‌ ಪುಣ್ಯತಿಥಿಗಾಗಿ ಭಾರತದಿಂದ ತೆರಳಲು ವೀಸಾ ಪಡೆದ ಸಿಕ್ಖ್ ಯಾತ್ರಿಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಂದೆಡೆ ನಾವು ಅನುಮತಿ ನೀಡಿದ್ದೇವೆ ಎಂದು ಪಾಕ್‌ ಹೇಳುತ್ತಿದ್ದರೆ, ವಾಘಾ ಗಡಿಯ ವರೆಗೆ ಈ ಯಾತ್ರಿಕರನ್ನು ಕರೆದೊಯ್ಯಲು ನಮಗೆ ಅನುಮತಿ ಇಲ್ಲ ಎಂದು ಭಾರತೀಯ ರೈಲ್ವೇ ಹೇಳಿದೆ. ಹೀಗಾಗಿ 130 ಯಾತ್ರಾರ್ಥಿಗಳು ವೀಸಾ ಪಡೆದಿದ್ದರೂ ಪ್ರಯಾಣಿಸಲು ಸಾಧ್ಯ ವಾಗದಂತಾಗಿದೆ. ಪ್ರತಿ ವರ್ಷ ಶಹದಿಜೋರ್‌ ಮೇಳ ಹೆಸರಿನಲ್ಲಿ ಲಾಹೋರ್‌ನಲ್ಲಿ ಸಿಕ್ಖ್ರು ಪುಣ್ಯತಿಥಿ ಆಚರಿಸು ತ್ತಾರೆ. ಆದರೆ ಈ ಬಾರಿ ಉಭಯ ಬಿಕ್ಕಟ್ಟು ಇದಕ್ಕೆ ಅಡ್ಡಿಯಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next