Advertisement

ಮುಗಿಯದ ವಿವಾದ : ಗ್ಯಾಸ್ ಪೈಪ್ ಲೈನ್ ಗೆ ವಿರೋಧ ವ್ಯಕ್ತಪಡಿಸಿಲ್ಲವೆಂದ ರಾಮದಾಸ್

11:59 AM Jan 28, 2022 | Team Udayavani |

ಬೆಂಗಳೂರು : ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ್ ನಡುವಿನ ವಾಗ್ವಾದ ಮತ್ತೆ ಮುಂದುವರಿದಿದೆ.

Advertisement

ನಾನು ಯಾವುದೇ ಕಾರಣಕ್ಕೂ ಗ್ಯಾಸ್ ಪೈಪ್ ಲೈನ್ ಗೆ ವಿರೋಧ ವ್ಯಕ್ತ  ಪಡಿಸಿಲ್ಲ.ನೆನ್ನೆ  ಸಭೆಯಲ್ಲಿ ಈ  ಯೋಜನೆ ಬಗ್ಗೆ ಸಂಪೂರ್ಣ ವಿವರ ಒದಗಿಸಿರಲಿಲ್ಲ. ಅದನ್ನಷ್ಟೇ ಕೇಳಿದ್ದೇನೆ ಎಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪೂರ್ತಿ ವಿವರ ಸರಿಯಾಗಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದೆ ಅಷ್ಟೇ.ಅದನ್ನು ಹೊರತುಪಡಿಸಿ ಮೋದಿ ಯೋಜನೆಯನ್ನು ವಿರೋಧ ವ್ಯಕ್ತ ಪಡಿಸಿದ್ದೇನೆ ಎಂಬುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿಗೆ ಬಂದಿರುವ ಶಾಸಕರು ಕಾಂಗ್ರೆಸ್ ಗೆ ಮತ್ತೆ ವಾಪಸ್ ಹೋಗ್ತಾರೆಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮನೆಗೆ ಸೊಸೆ ಬಂದ ಮೇಲೆ ಅವರು ನಮ್ಮ ಮಗಳೇ. ಅದೇ ರೀತಿ ಕಾಂಗ್ರೆಸ್ ನಿಂದ ಬಂದವರು ನಮ್ಮ ಸಹೋದರರು. ಹೀಗಾಗಿ ನಾವೆಲ್ಲ ಸೇರಿ ಪಕ್ಷ ಮತ್ತಷ್ಟು ಬಲಪಡಿಸುತ್ತೇವೆ ಎಂದರು.

ಮುಂದಿನ ಚುನಾವಣೆಯನ್ನ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸುತ್ತೇವೆ. ಬೊಮ್ಮಾಯಿ ಸರ್ಕಾರವೇ ಆಡಳಿತಕ್ಕೆ ಬರಲಿದೆ.  ನಾವೆಲ್ಲ ಹಿರಿಯ ಶಾಸಕರು. ನಾವು ಸಂದರ್ಭಗಳಿಗೆ ತಕ್ಕಂತೆ ನಡೆದುಕೊಂಡು ಹೋಗಬೇಕು.ಅದು ನಮ್ಮ ಜವಾಬ್ದಾರಿಯೂ ಕೂಡಾ. ಮಂತ್ರಿ ಸ್ಥಾನ ಸಿಕ್ಕಿಲ್ಲ, ಸಿಕ್ಕಿದೆ ಅಂತ ಹೇಳ್ಕೊಳ್ಳೋದಲ್ಲ.ನಾನು 25 ವರ್ಷಗಳಿಂದ ಶಾಸಕಾನಾಗಿದ್ದೇನೆ. ನನ್ನ ಅನುಭವವನ್ನು ಜನರಿಗೆ ತಿಳಿಸೋದ್ರಲ್ಲೇ‌ ನನಗೆ ಸಂತೋಷ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next