Advertisement

ವ್ಯಕ್ತಿ ಮಾತ್ರವಲ್ಲ ಪಕ್ಷಕ್ಕೆ ಶಕ್ತಿಯಾಗಿದ್ದರು

01:49 PM Nov 13, 2018 | Team Udayavani |

ಬಸವಕಲ್ಯಾಣ: ಕೇಂದ್ರದ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಎಚ್‌.ಎನ್‌. ಅನಂತಕುಮಾರ್‌ ನಿಧನರಾದ ಹಿನ್ನೆಲೆಯಲ್ಲಿ ಸೋಮವಾರ ಭಾರತೀಯ ಜನತಾ ಪಕ್ಷದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಕ್ಷದ ಕಚೇರಿಯಿಂದ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ವೃತ್ತದ ವರೆಗೆ ಭಾವಚಿತ್ರ ಮೆರವಣಿಗೆ ನಡೆಸಿ ಶೋಕಾಚರಣೆ ಆಚರಿಸಿದರು. ಈ ವೇಳೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ
ಸೂರ್ಯಕಾಂತ ಚಿಲ್ಲಾಬಟ್ಟೆ ಮಾತನಾಡಿ, ಅನಂತಕುಮಾರ್‌ ಅವರ ನಿಧನದಿಂದ ಕೇವಲ ಪಕ್ಷಕ್ಕೆ ಮಾತ್ರವಲ್ಲದೆ ದೇಶಕ್ಕೂ ತುಂಬಲಾರದ ನಷ್ಟವಾಗಿದೆ. ಸಾಮಾನ್ಯ ಕಾರ್ಯಕರ್ತರನ್ನೂ ಗುರುತಿಸಿ ಧೈರ್ಯ ತುಂಬುವುದರೊಂದಿಗೆ, ಪಕ್ಷದ ಬೆಳವಣಿಗೆಯ ಬಗ್ಗೆ ಕಾರ್ಯ ಚಟುವಟಿಕೆಗಳನ್ನು ಹೇಗೆ ಮಾಡಬೇಕು ಎಂಬ ತಂತ್ರವನ್ನು ಬಲ್ಲವರಾಗಿದ್ದರು ಎಂದರು.

Advertisement

ಜಿಲ್ಲಾ ಉಪಾಧ್ಯಕ್ಷ ರವಿ ಚಂದನಕೇರೆ ಮಾತನಾಡಿ, ಅನಂತ ಕುಮಾರ ಅವರು ವ್ಯಕ್ತಿಯಾಗಿರಲಿಲ್ಲ ಅವರು ಪಕ್ಷಕ್ಕೆ ಶಕ್ತಿಯಾಗಿದ್ದರು. ಆದರೆ ಇಂದು ಅವರನ್ನು ಕಳೆದುಕೊಂಡ ಕಾರ್ಯಕರ್ತರು ಹಾಗೂ ಮುಖಂಡರು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ ಎಂದು ಹೇಳಿದರು. ತಾಲೂಕು ಅಧ್ಯಕ್ಷ ವೀರಣ್ಣ ಹಲಗೆ, ನಗರ ಅಧ್ಯಕ್ಷ ಶಿವಪುತ್ರ ಗೌರ, ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ಅರವಿಂದ ಮುತ್ಯೆ, ಎಸ್‌ಸಿ ಮೊರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ದೀಪಕ ಗಾಯಕವಾಡ, ಪ್ರದಾನ ಕಾರ್ಯದರ್ಶಿ ರವಿ ಸ್ವಾಮಿ, ಬಸವರಾಜ ಸ್ವಾಮಿ, ಶಾಲಿವಾನ ಪಟೆ, ಧನರಾಜ ಲಾಡೆ, ಅಶ್ವಿ‌ನ ಗೋರ್ಟೆ, ಅಮೃತ ಬಿರಾದಾರ, ಇಸ್ಮಾಯಿಲ್‌ ಪರತಾಪೂರ, ವಿಜಯಕುಮಾರ ವಕಾರೆ, ವಿನೋದ ನಾಗವಂಶಿ, ಲಿಂಗರಾಜ ಸರಡಗಿ ಹಾಗೂ ಕಾರ್ಯಕತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next