Advertisement

ಒಂದೇ ಸಿರಿಂಜ್‌ನಿಂದ 30 ಮಂದಿಗೆ ಲಸಿಕೆ!

07:18 PM Jul 28, 2022 | Team Udayavani |

ಭೋಪಾಲ್‌: ಒಂದೇ ಸಿರಿಂಜ್‌ ಬಳಸಿಕೊಂಡು 30 ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಹಾಕಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ.

Advertisement

ಸಾಗರ ನಗರದ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಕೊರೊನಾ ಲಸಿಕೆ ಅಭಿಯಾನದಲ್ಲಿ ಈ ರೀತಿ ಘಟನೆ ನಡೆದಿದೆ. ಜಿತೇಂದ್ರ ಹೆಸರಿನ ವೈದ್ಯಕೀಯ ಸಿಬ್ಬಂದಿ ಸುಮಾರು 30 ವಿದ್ಯಾರ್ಥಿಗಳಿಗೆ ಒಂದೇ ಸಿರಿಂಜ್‌ ಬಳಸಿ ಲಸಿಕೆ ಹಾಕಿದ್ದಾನೆ.

ಈ ವಿಚಾರವನ್ನು ಪೋಷಕರು ಪ್ರಶ್ನಿಸಿದಾಗ, “ಹಿರಿಯ ಅಧಿಕಾರಿಗಳು ಕೊಟ್ಟಿರುವುದೇ ಒಂದು ಸಿರಿಂಜ್‌. ಪ್ರಶ್ನಿಸಿದ್ದಕ್ಕೆ, ಒಂದರಲ್ಲೇ ಎಲ್ಲರಿಗೂ ಲಸಿಕೆ ಹಾಕುವುದಕ್ಕೆ ಸೂಚಿಸಿದ್ದಾರೆ’ ಎಂದು ತಿಳಿಸಿದ್ದಾನೆ.

ಆತನ ಹೇಳಿಕೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಳ್ಳಲಾಗಿದೆ. ಈ ಸಂಬಂಧ ಜಿತೇಂದ್ರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next