Advertisement

ರಾಜಕೀಯ ಪ್ರವೇಶಿಸುವ ತರಾತುರಿಯಲ್ಲಿ ನಾನಿಲ್ಲ: ರಾಬರ್ಟ್‌ ವಾದ್ರಾ

11:32 AM Feb 25, 2019 | udayavani editorial |

ಹೊಸದಿಲ್ಲಿ : ‘ರಾಜಕೀಯ ರಂಗಕ್ಕೆ ಧುಮುಕುವ ತರಾತುರಿಯಲ್ಲಿ ನಾನಿಲ್ಲ’  ಎಂದು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾವ ಮತ್ತು ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಇಂದು ಸೋಮವಾರ ಹೇಳಿದ್ದಾರೆ.

Advertisement

ನಿನ್ನೆಯಷ್ಟೇ ವಾದ್ರಾ ಜನಸೇವೆಗಾಗಿ ದೊಡ್ಡ ಪಾತ್ರ ವಹಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದನ್ನು ಅನುಸರಿಸಿ ಉತ್ತರ ಪ್ರದೇಶದಲ್ಲಿನ ಅವರ ಹುಟ್ಟೂರಾದ ಮೊರಾದಾಬಾದ್‌ ನಲ್ಲಿ “ಚುನಾವಣೆಯಲ್ಲಿ ಸ್ಪರ್ಧಿಸಲು ನಿಮಗಿದೋ ಸ್ವಾಗತ’ ಎಂಬ ಭಾರೀ ದೊಡ್ಡ poster ಗಳು ಕಂಡು ಬಂದಿದ್ದವು. 

ನನ್ನ ವಿರುದ್ಧ ಇಡಿ, ಸಿಬಿಐ ಕೇಸುಗಳು ಮುಗಿದ ಬಳಿಕ ನಾನು ಜನಸೇವೆಗಾಗಿ ದೊಡ್ಡ ಮಟ್ಟದ ಪಾತ್ರ ವಹಿಸಲು (ರಾಜಕೀಯ ಸೇರಲು) ಬಯಸುವೆ ಎಂದು ವಾದ್ರಾ ನಿನ್ನೆ ಭಾನುವಾರ ತಮ್ಮ ಫೇಸ್‌ ಬುಕ್‌ ಪೋಸ್ಟ್‌ನಲ್ಲಿ ಹೇಳಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next