Advertisement

ಹೊಸ ಪಕ್ಷ ಇಲ್ಲ,ಎಸ್‌ಪಿ ಒಂದಾಗಿಯೇ ಇರಲಿದೆ: ಮುಲಾಯಂ ಸಿಂಗ್‌

03:00 PM Jan 11, 2017 | Team Udayavani |

ಲಕ್ನೋ: ಸಮಾಜವಾದಿ ಪಕ್ಷದಲ್ಲಿ ಕಲಹ ತೀವ್ರವಾಗಿರುವ ಬೆನ್ನಲ್ಲೇ ಪಕ್ಷವನ್ನು  ಒಗ್ಗಟ್ಟಾಗಿರಲು ಮುಲಾಯಂ ಸಿಂಗ್‌ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 

Advertisement

ಬುಧವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮುಲಾಯಂ ಸಿಂಗ್‌ ‘ನಮ್ಮ ಪಕ್ಷವನ್ನು ಕಟ್ಟಿ ಬೆಳೆಸಲು ಹಲವು ಹಿರಿಯರು ಶ್ರಮ ಪಟ್ಟಿದ್ದಾರೆ. ಹಲವು ಹೋರಾಟಗಳ ನಂತರ ಪಕ್ಷವನ್ನು ಕಟ್ಟಲಾಗಿದೆ. ಪಕ್ಷದ ಕಾರ್ಯಕರ್ತರು ಕಷ್ಟಗಳನ್ನು ಎದುರಿಸಿದ್ದಾರೆ. ನಾನು ತುರ್ತು ಪರಿಸ್ಥಿತಿಯ ವೇಳೆ ಜೈಲು ಪಾಲಾಗಿದ್ದೆ, ಆವಾಗ ಅಖೀಲೇಶ್‌ 2.5 ವರ್ಷದ ಮಗುವಿದ್ದ’ ಎಂದರು. 

‘ನಾನು ಎಲ್ಲವನ್ನೂ ದೇಶಕ್ಕಾಗಿ ಮಾಡುತ್ತಿದ್ದೇನೆ. ಬೇರೆ ಯಾವುದಕ್ಕಾಗಿ ನಾನು ಹೋರಾಡಲಿ’ ಎಂದು ಪ್ರಶ್ನಿಸಿದ ಮುಲಾಯಂ ‘ನಮ್ಮ ಪಕ್ಷವನ್ನು ಒಡೆಯಲು ಯಾರು ಕುತಂತ್ರ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ನಮ್ಮ ಪಕ್ಷ ಒಗ್ಗಟ್ಟಾಗಿ ಇರುವ ವಿಶ್ವಾಸ ನನಗಿದೆ .ಜನತೆ ಮತ್ತು ಕಾರ್ಯಕರ್ತರು ಪಕ್ಷವನ್ನು ಒಗ್ಗಟ್ಟಾಗಿ ಇಡಲಿದ್ದಾರೆ. ಪಕ್ಷದ ಹೆಸರಾಗಲಿ ಚಿಹ್ನೆಯಾಗಲಿ ಬದಲಾಗಲಿ, ನನ್ನ ಸೈಕಲ್‌ ಮಾತ್ರ ನನ್ನೊಂದಿಗೆ ಇರುತ್ತದೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next