Advertisement

ಡಿಕೆಶಿ ಭೇಟಿಯಾದವರೆಲ್ಲ ಕಾಂಗ್ರೆಸ್‌ ಸೇರಲ್ಲ

10:59 PM Nov 11, 2019 | Team Udayavani |

ಹುಬ್ಬಳ್ಳಿ: ಮಾಜಿ ಶಾಸಕ ರಾಜು ಕಾಗೆ ಸೇರಿ ಬಿಜೆಪಿಯ ಕೆಲ ಮುಖಂಡರು ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿರುವುದರ ಕುರಿತು ಪಕ್ಷದ ರಾಜ್ಯಾಧ್ಯಕ್ಷರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ಅವ ರನ್ನು ಭೇಟಿಯಾಗಿರುವುದು ಮಾಧ್ಯಮಗಳಿಂದ ಗೊತ್ತಾಗಿದೆ.

Advertisement

ಈ ಕುರಿತು ಪಕ್ಷ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ವರಿಷ್ಠರಿಗೆ ಬಿಟ್ಟ ವಿಚಾರ. ಅನರ್ಹ ಶಾಸಕರ ಪ್ರಕರಣದ ತೀರ್ಪು ಬರುವವರೆಗೂ ಇಂತಹ ರಾಜಕೀಯ ಗೊಂದಲಗಳು ಮುಂದುವರಿಯುತ್ತವೆ. ತೀರ್ಪು ಬಂದ ನಂತರ ರಾಜಕೀಯದ ಚಿತ್ರಣ ಹೊರಬೀಳಲಿದೆ. ಬೇರೆ ಪಕ್ಷದ ನಾಯಕರನ್ನು ಭೇಟಿಯಾದ ತಕ್ಷಣ ಅವರು ಪಕ್ಷ ಬಿಟ್ಟು ಹೋಗುತ್ತಾರೆ ಎಂದು ಹೇಳಲಾಗದು. ಕಾಗೆ ಕಾಂಗ್ರೆಸ್‌ ಸೇರು ತ್ತಾರೆ ಎನ್ನುವುದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next