Advertisement

ಜಿ.ಟಿ.ದೇವೆಗೌಡ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ : ಸಿದ್ದರಾಮಯ್ಯ

12:16 PM Nov 09, 2021 | Team Udayavani |

ಮೈಸೂರು : ಜೆಡಿಎಸ್ ಶಾಸಕ ಜಿ.ಟಿ.ದೇವೆಗೌಡ ಅವರು ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ, ಸದ್ಯಕ್ಕೆ ಯಾವುದೇ ಭರವಸೆ ಕೊಟ್ಟಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಂಗಳವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಜಿಟಿಡಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ವಿಚಾರಕ್ಕೆ ಪ್ರತಿಕ್ರಿಯಿಸಿ,
‘ಬೇರೆ ಬೇರೆ ಪಕ್ಷದವರು ಒಂದೇ ವೇದಿಕೆಗೆ ಬರುವ ಹಾಗಿಲ್ಲವೇ? ವಿರೋಧ ಪಕ್ಷದವರು, ಆಡಳಿತದ ಪಕ್ಷದವರು ಒಂದೇ ವೇದಿಕೆಗೆ ಬರುವುದಿಲ್ಲವೇ? ಜಿಡಿಡಿ ಕಾಂಗ್ರೆಸ್‌ ಸೇರುತ್ತಾರೆ ಅನ್ನುವುದು ಬೇರೆ ವಿಚಾರ’ ಎಂದರು.

ಗುಬ್ಬಿಯಲ್ಲಿ ಖಾಸಗಿ ಆಸ್ಪತ್ರೆ ಉದ್ಘಾಟನೆಗೆ ಹೋಗಿದ್ದೆ.ಎಸ್.ಆರ್.ಶ್ರೀನಿವಾಸ್‌ರನ್ನು ಹಿಂದೆಯೇ ಕಾಂಗ್ರೆಸ್‌ಗೆ ಕರೆದಿದ್ದೆ.
ಅವರು ಬರುವುದಿಲ್ಲ ಅಂದಿದ್ದರು. ಈಗ ಜೆಡಿಎಸ್‌ನಲ್ಲಿ ಕುತ್ತಿಗೆ ಹಿಡಿದು ಹೊರ ದಬ್ಬುತ್ತಿದ್ದಾರೆ.ಈಗಲಾದರೂ ಬರುತ್ತೀಯಾ ಹೇಗೆ ಅಂತ ಆಫರ್ ಕೊತ್ತಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next