Advertisement

ಅಧಿಕಾರದಲ್ಲಿದ್ದರೂ ಅಂಟಿಕೊಂಡಿಲ್ಲ: UP CM ಯೋಗಿ ಆದಿತ್ಯನಾಥ್‌

11:18 AM Mar 19, 2019 | Team Udayavani |

ಲಕ್ನೋ : ಅಧಿಕಾರದಲ್ಲಿರುವ ಹೊರತಾಗಿಯೂ ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂದು ಸನ್ಯಾಸಿಯಾಗಿರುತ್ತಾ ರಾಜಕಾರಣಿಯಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. 

Advertisement

ಸನ್ಯಾಸಿಯಾಗಿರುವ ನೀವು ರಾಜಕಾರಣವನ್ನು ಏಕೆ ಸೇರಿದಿರಿ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಯೋಗಿ ಆದಿತ್ಯನಾಥ್‌ , ಸಮಾಜ ಸೇವೆಗಾಗಿ ನಾನು ರಾಜಕಾರಣ ಸೇರಿದೆ ಎಂದು ಹೇಳಿದರು. 

ಅಧಿಕಾರದಲ್ಲಿದ್ದರೂ ನಾನು ಅಧಿಕಾರ ಸಂಲಿಪ್ತ; ಅಧಿಕಾರ ಪ್ರಜ್ಞೆ ಹೊಂದಿಲ್ಲದಿರುವ ಕಾರಣ ನಾನು ಅಧಿಕಾರಕ್ಕೆ ನಿರ್ಲಿಪ್ತ; ನಾನಿಲ್ಲಿರುವುದು ಲೋಕ ಕಲ್ಯಾಣ, ರಾಷ್ಟ್ರ ಕಲ್ಯಾಣಕ್ಕೆ ಎಂದು ಯೋಗಿ ಆದಿತ್ಯನಾಥ್‌ ಅವರು ಮುಖ್ಯಮಂತ್ರಿಯಾಗಿ ಈಚೆಗೆ ಎರಡು ವರ್ಷ ಪೂರೈಸಿದ ಪ್ರಯುಕ್ತ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next