Advertisement

ಸಚಿವರೊಂದಿಗೆ ವಾದ ಮಾಡಲ್ಲ: ಸೂಲಿಬೆಲೆ

11:16 PM Oct 02, 2019 | Team Udayavani |

ಬೆಂಗಳೂರು: ಡಿ.ವಿ.ಸದಾನಂದ ಗೌಡ ಅವರು ಬರ ಪರಿಹಾರ ವಿಚಾರಕ್ಕೆ ನಾನು ಮಾಡಿದ್ದ ಟ್ವೀಟ್‌ನ್ನು ವೈಯಕ್ತಿಕವಾಗಿ ಯಾಕೆ ತೆಗೆದುಕೊಂಡಿದ್ದಾರೆ ಎನ್ನುವುದು ಗೊತ್ತಿಲ್ಲ. ನಾನೆಲ್ಲೂ ನನ್ನ ಟ್ವೀಟ್‌ನಲ್ಲಿ ಯಾರ ಬಗ್ಗೆಯೂ ವೈಯಕ್ತಿಕವಾಗಿ ಬರೆದಿಲ್ಲ ಎಂದು ಯುವಬ್ರಿಗೆಡ್‌ ಸಂಘಟಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯಿಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಟ್ವೀಟ್‌ ಮಾಡಿದ ನಂತರ ಅದರ ಮುಂದುವರಿದ ಭಾಗವಾಗಿ ಸದಾನಂದಗೌಡರು ಟ್ವೀಟ್‌ ಮಾಡಿದ್ದಾರೆ.

Advertisement

ಅಲ್ಲಿಯವರೆಗೂ ಬರ ಪರಿಹಾರದ ಕಡಿತ ಏನಾಗಿದೆ ಎಂಬುದು ಈ ಸಚಿವರಿಗೂ ಗೊತ್ತಿರಲಿಕ್ಕಿಲ್ಲ. ಸಚಿವ ಸ್ಥಾನ ಮತದಾರ ನೀಡಿದ ಭಿಕ್ಷೆ ಎನ್ನುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.? ಸಚಿವರೊಂದಿಗೆ ವಾದ ಮಾಡುವುದಿಲ್ಲ. ಅವರು ನೇರವಾಗಿ ದೇಶದ್ರೋಹಿ ಎಂದೇ ಹೇಳಿಬಿಟ್ಟಿದ್ದಾರೆ. ಬರಪರಿಹಾರ ಏಕೆ ಬಂದಿಲ್ಲ ಎಂದು ಕೇಳಿದ್ದೇ ತಪ್ಪಾ? ಟ್ವೀಟ್‌ ಖಾತೆಯಿಂದ ನನ್ನನ್ನು ಬ್ಲಾಕ್‌ ಮಾಡಿರುವುದರ ಸ್ಕ್ರೀನ್‌ಶಾಟ್‌ ಕೂಡ ಇದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next