Advertisement

ಕರ್ನಾಟಕ ಬಂದ್: ಕೊಪ್ಪಳದಲ್ಲಿ ಬಂದ್ ಗೆ ಸಾಧಾರಣ ಪ್ರತಿಕ್ರಿಯೆ

01:42 PM Sep 28, 2020 | keerthan |

ಕೊಪ್ಪಳ: ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ಮಾಡಿದ್ದನ್ನು ಖಂಡಿಸಿ ನೀಡಿರುವ ಕರ್ನಾಟಕ ಬಂದ್ ಕರೆಗೆ ಕೊಪ್ಪಳದಲ್ಲಿ ಬೆಳಗ್ಗೆ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ರೈತಪರ ಸಂಘಟನೆಗಳು ಬೆಳಗ್ಗೆ ಕೇಂದ್ರಿಯ ಬಸ್ ನಿಲ್ದಾಣದ ಬಳಿ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ, ಕೇಂದ್ರ, ರಾಜ್ಯ ಸರ್ಕಾರವು ಜನ ವಿರೋಧಿ, ರೈತರ ಜೀವಕ್ಕೆ ಕುತ್ತು ತರುವಂತಹ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿವೆ‌. ಮುಂದಿನ ದಿನದಲ್ಲಿ ರೈತ ಬದುಕು ದುಸ್ಥರವಾಗಲಿದೆ. ತಿದ್ದುಪಡಿ ಕಾಯ್ದೆಗಳಿಗೆ ರಾಷ್ಟ್ರಪತಿಗಳು ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದು ಎಂದು ಒತ್ತಾಯಿಸಿದವು.

ಇದನ್ನೂ ಓದಿ:ಮಂಡ್ಯ: ಸಂಘಟನೆಗಳಿಂದ ಪ್ರತಿಭಟನೆ, ಬಸ್ ಓಡಾಟ ಇದ್ದರೂ ಜನಸಂಚಾರ ವಿರಳ

ಕೊಪ್ಪಳದಲ್ಲಿ ಕರ್ನಾಟಕ ಬಂದ್ ಗೆ ಬೆಳಗ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗ್ಗೆ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಅದರೆ ಅಂಗಡಿ ಮುಂಗಟ್ಟು ತೆರೆದಿದ್ದವು. ಸಾರಿಗೆ ಘಟಕಕ್ಕೆ ಹೊರಗಡೆಯಿಂದ ಬಸ್ ಆಗಮಿಸುತ್ತಿದ್ದವು. ಸಂಚಾರ ಎಂದಿನಂತೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next