Advertisement

ಕಾನೂನು ಸುರಕ್ಷೆ ಹೆಸರಿನಲ್ಲಿ ಉಳಿದ‌ ಕ್ಷೇತ್ರದ ಶಾಸಕರಿಗೆ ಮಾಡಿದ ಅವಮಾನ ಅಲ್ವಾ? –ಹೊಸಬಾಳೆ

01:23 PM Apr 15, 2023 | Team Udayavani |

ಶಿರಸಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾಗಿ ಹೇಳಿದ್ದಾರೆ. ಆದರೆ, ಇದು ರಾಜ್ಯದ ಉಳಿದ ಕ್ಷೇತ್ರ ಗಳ ಶಾಸಕರಿಗೆ‌ ಮಾಡಿದ ಅವಮಾನ ಅಲ್ಲವಾ? ಅಲ್ಲಿ ಅಹಿತಕರ ಘಟನೆ ನಡೆಯುತ್ತಿವೆ ಎಂದರ್ಥ ಅಲ್ಲವಾ? ಎಂದು ಶಿರಸಿ ವಿಧಾನ ಸಭೆಯ ಪಕ್ಷೇತರ ಅಭ್ಯರ್ಥಿ ವೆಂಕಟೇಶ ಹೆಗಡೆ ಹೊಸಬಾಳೆ ಟಾಂಗ್ ನೀಡಿದರು.

Advertisement

ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಶಾಸಕರು ಹೆಚ್ಚಿನ ಅಹಿತಕರ ಘಟನೆ ನಡೆಯದಂತೆ ಕಾನೂನು‌ ಕಾಪಾಡಿದ್ದೇನೆ ಎಂಬ ಹೇಳಿಕೆ ನೀಡಿದ್ದು 224 ಎಂ.ಎಲ್.ಎಗಳಿಗೆ ಅವಮಾನ‌ ಮಾಡಿದಂತೆ‌ ಆಗಿದೆ. ಈ‌ ಕ್ಷೇತ್ರ ಬಿಟ್ಟು ತೊಂದರೆ ಆಗುತ್ತಿದೆಯಾ? ಗೂಂಡಾಗಿರಿ ಇದೆಯಾ? ಎಲ್ಲಿ ಈ ತರ ಅಹಿತಕರ ಘಟನೆ ನಡೆದಿದೆ. ಪರೇಶ ಮೇಸ್ತಾ ತೀರಿಕೊಂಡಾಗ ಈ ಕ್ಷೇತ್ರದಲ್ಲಿ ಬೆಂಕಿ ಹಚ್ಚಿದವರು ಯಾರು? ಆ ಕೇಸ್ ನಲ್ಲಿ ಇನ್ನೂ ಪರಿಹಾರ ಆಗದ ಜನರಿಲ್ಲವಾ? ಅವರಿಗೇನು‌ ನ್ಯಾಯ ಕೊಡಿಸಿದ್ದೀರಿ? ಎಂದೂ ಕೇಳಿದರು.

ಈ ವೇಳೆ ಸೀತಾರಾಮ‌ ಕಿಬ್ಬಳ್ಳಿ, ಪ್ರಕಾಶ ಹೆಗಡೆ, ಶ್ರೀಪಾದ ರಾಯ್ಸದ, ಎಂ.ಆರ್.ಕಾನಗೋಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next