Advertisement

ಯುದ್ಧರಹಿತ ಪ್ರತೀಕಾರ: ಪೇಜಾವರ ಶ್ರೀ

12:45 AM Feb 16, 2019 | Team Udayavani |

ಉಡುಪಿ: ಭಾರತದ ಸೈನಿಕರನ್ನು ನಿರ್ದಯವಾಗಿ ಕೊಂದಿರುವುದಕ್ಕೆ ಯುದ್ಧವಿಲ್ಲದೆ ಬೇರೆ ಮಾರ್ಗದಿಂದ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದ್ದಾರೆ. 

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಯುದ್ಧ ಮಾಡಿದರೆ ಅನೇಕ ಜನರ ಜೀವ ಹಾನಿಯಾಗುತ್ತದೆ. ಆದ್ದರಿಂದ ಸೀಮಿತ ಮಾರ್ಗದಲ್ಲಿ ಶಾಸ್ತಿ ಮಾಡಬೇಕೆಂದರು. ಸರ್ಜಿಕಲ್‌ ಸ್ಟ್ರೈಕ್‌ ಆಗಬಹುದೇ ಎಂದಾಗ ಸರಕಾರ ಇದರ ಬಗ್ಗೆ ನಿರ್ಧರಿಸಬೇಕು ಎಂದರು.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ಉಪಾಸನೆ ಮಾಡಿದ ಯೋಗಿಗೆ ದೊರಕಿದ ಮೋಕ್ಷವೇ ದೊರಕುತ್ತದೆ ಎಂಬ ಮಾತು ಮಹಾಭಾರತದಲ್ಲಿದೆ. ಆದ್ದರಿಂದ ಇವರಿಬ್ಬರಿಗೂ ಶಾಸ್ತ್ರ ಸಮಾನ ಸ್ಥಾನ ನೀಡಿದೆ. ಹುತಾತ್ಮರಾದ ಸೈನಿಕರಿಗೆ ಚಿರಶಾಂತಿ ದೊರಕುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next