Advertisement

ಮತ ನೀಡದಿದ್ದರೆ ನೀರು, ವಿದ್ಯುತ್ ಏನೂ ಕೊಡಲ್ಲ.. ಮತದಾರರಿಗೆ ಸಚಿವರ ಬೆದರಿಕೆ

09:10 AM Mar 07, 2021 | Team Udayavani |

ಹೂಗ್ಲಿ: ಚುನಾವಣೆಯಲ್ಲಿ ಮತದಾರರ ಮನ ಸೆಳೆಯಲು ಅಭ್ಯರ್ಥಿಗಳು ವಿವಿಧ ರೀತಿಯ ಆಮಿಷ ಒಡ್ಡುವುದನ್ನು ನಾವು ಕಂಡಿದ್ದೇವೆ. ಬೇರೆ ಬೇರೆ ರೀತಿಯ ಸೌಲಭ್ಯಗಳು ನೀಡುತ್ತೇವೆ ಎನ್ನುವ ಭರವಸೆಗಳ ಮಹಾಪೂರವನ್ನೇ ಹರಿಸುತ್ತಾರೆ. ಆದರೆ ಸದ್ಯ ಚುನಾವಣೆ ಘೋಷಣೆಯಾಗಿರುವ ಪಶ್ಚಿಮ ಬಂಗಾಳದಲ್ಲಿ ಇದಕ್ಕೆ ವಿರುದ್ಧವಾದ ಹೇಳಿಕೆಯೊಂದು ಹೊರಬಿದ್ದಿದೆ.

Advertisement

ನೀವು ನನಗೆ ಮತ ನೀಡದೆ ಇದ್ದರೆ ನಿಮಗೆ ನೀರು, ವಿದ್ಯುತ್ ನೀಡದಂತೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ ಪಶ್ಚಿಮ ಬಂಗಾಳದ ಸಚಿವ ತಪನ್ ದಾಸ್ ಗುಪ್ತ.

ಸಪ್ತಗ್ರಾಮ ವಿಧಾನಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿಯಾಗಿರುವ ತಪನ್ ದಾಸ್, ಹೂಗ್ಲಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:5 ಕೋ. ರೂ.ಡೀಲ್‌ ಯಾವಾಗ ನಡೆಯಿತು: ಕುಮಾರಸ್ವಾಮಿಗೆ ದಿನೇಶ್‌ ಕಲ್ಲಹಳ್ಳಿ ಪ್ರಶ್ನೆ

‘ಯಾವ ಪ್ರದೇಶದಿಂದ ನನಗೆ ಮತ ಬೀಳುವುದಿಲ್ಲವೋ ಆ ಪ್ರದೇಶದ ಜನರಿಗೆ ನೀರು ಮತ್ತು ವಿದ್ಯುತ್ ಸಿಗುವುದಿಲ್ಲ. ಅವರು ಅದಕ್ಕಾಗಿ ಬಿಜೆಪಿಯನ್ನು ಕೇಳಬಹುದು” ಎಂದು ಮತದಾರರಿಗೆ ಬೆದರಿಸಿದ್ದಾರೆ.

Advertisement

ಎರಡು ಬಾರಿ ಶಾಸಕರಾಗಿರುವ ತಪನ್ ದಾಸ್ ಗುಪ್ತಾ ಅವರಿಗೆ ಈ ಬಾರಿಯೂ ತೃಣಮೂಲ ಕಾಂಗ್ರೆಸ್ ಸಪ್ತಗ್ರಾಮ ಕ್ಷೇತ್ರದಲ್ಲಿ ಟಿಕೆಟ್ ನೀಡಿದೆ.

ಇದನ್ನೂ ಓದಿ: ಬಾಕಿ ಹಣ ಪಾವತಿಸದಿದ್ದಕ್ಕೆ ಹೊಲಿಗೆ ಹಾಕಲಿಲ್ಲ…ಪುಟ್ಟ ಕಂದಮ್ಮನ ಜೀವ ತೆಗೆದ ಖಾಸಗಿ ವೈದ್ಯರು

Advertisement

Udayavani is now on Telegram. Click here to join our channel and stay updated with the latest news.

Next