Advertisement

“ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು’

01:00 AM Mar 20, 2019 | Team Udayavani |

ಉಡುಪಿ: ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು. ಯಾವುದೇ ಮತದಾರ  ಮತದಾನದಿಂದ ಹೊರಗುಳಿಯಬಾರದು ಎಂದು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸಿಂಧೂ ರೂಪೇಶ್‌  ಹೇಳಿದರು.

Advertisement

ಜಿಲ್ಲಾಡಳಿತ  ಹಾಗೂ ಸ್ವೀಪ್‌ , ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ತಾ.ಪಂ. ಉಡುಪಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಚುನಾವಣಾ ಸಾಕ್ಷರತಾ ಕ್ಲಬ್‌ ಸಂಚಾಲಕರು ಮತ್ತು ಬೂತ್‌ ಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  
ಉಡುಪಿ ತಾ.ಪಂ. ಕಾರ್ಯನಿರ್ವಾ ಹಣಾಧಿಕಾರಿ ಕೆ. ರಾಜು ಮತದಾನದ ಪ್ರತಿಜ್ಞೆ ಬೋಧಿಸಿದರು. ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಿಂಜೆ, ಡಯಟ್‌ನ ಉಪನಿರ್ದೇಶಕ  ಎಚ್‌. ಚಂದ್ರಶೇಖರ್‌,  ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಡಯಟ್‌ನ ಉಪನ್ಯಾಸಕ ಸುಬ್ರಹ್ಮಣ್ಯ,  ವಿಷಯ ಪರೀಕ್ಷಕ ನಾಗರಾಜು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್‌, ಚಿತ್ರಕಲಾ ಶಿಕ್ಷಕ ಪ್ರಶಾಂತ್‌ ಬಿ. ಪಿ., ಸೈಂಟ್‌ ಸಿಸಿಲಿ ಸಂಸ್ಥೆಯ ಸಂಚಾಲಕರು, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ದಯಾನಂದ್‌,  ವಿಶ್ವಾಸ್‌ ಮಲ್ಪೆ, ಕರುಣಾಕರ ಶೆಟ್ಟಿ ಬೈಂದೂರು,  ಶಿವಾನಂದ, ಪ್ರಶಾಂತ್‌ ಬ್ರಹ್ಮಾವರ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next