Advertisement

ಈ ವರ್ಷ ಬೋಧನಾ ಶುಲ್ಕ ಹೆಚ್ಚಳ ಇಲ್ಲ: ಶ್ರೀನಿವಾಸ್‌

06:38 AM May 29, 2020 | Team Udayavani |

ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಈ ವರ್ಷ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ಬೋಧನಾ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧರಿಸಿವೆ ಎಂದು ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆ ಗಳ ಒಕ್ಕೂಟದ ಜಿಲ್ಲಾಧ್ಯಕ್ಷ, ರಾಜ್ಯ  ವಕೀಲರ ಪರಿಷತ್‌ ಉಪಾಧ್ಯಕ್ಷ ಬಿ.ವಿ. ಶ್ರೀನಿವಾಸ್‌ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದರು.

Advertisement

ಜಿಲ್ಲೆಯಲ್ಲಿ ಕೊರೊನಾ ವಾರಿ ಯರ್ ಮಕ್ಕಳಿಗೆ 500 ರಿಂದ ಸಾವಿರ ರೂ.ವರೆಗೂ ಖಾಸಗಿ  ಶಾಲೆಗಳಲ್ಲಿ ಶುಲ್ಕ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಸರ್ಕಾರ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆ ಗಳಿಗೆ ಆರ್‌ಟಿಇ ಶುಲ್ಕ ಸುಮಾರು ನಾಲ್ಕು ಕೋಟಿ ಬಾಕಿ ಇದ್ದು, ಕೂಡಲೇ ಪಾವತಿ ಮಾಡಬೇಕೆಂದು ಆಗ್ರಹಿಸಿದರು.

ಬೋಧನಾ ಶುಲ್ಕ  ಹೆಚ್ಚಳ ಮಾಡದಿರಲು ಜಿಲ್ಲೆಯ ಎಲ್ಲ ತಾಲೂಕುಗಳ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಜಿಲ್ಲೆಯ ಎಲ್ಲ ಶಾಲೆಗಳಿಂದ ಸುಮಾರು 300 ಅನಾಥ ಮಕ್ಕಳಿಗೆ  ಈಗಾಗಲೇ ಉಚಿತ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಶಾಲೆಗಳ ಮುಂದೆ ಧರಣಿ ಕುಳಿತು ವೇತನ ಕೇಳುವ ಸ್ಥಿತಿ ಶಿಕ್ಷಕರಿಗೆ ಎದುರಾ ಗಿದೆ.

ಸರ್ಕಾರದ ಆದೇಶದಿಂದ ಪೋಷ ಕರು ಕಳೆದ ಸಾಲಿನ ಅಂತಿಮ ಸಾಲಿನ ಶುಲ್ಕ ಪಾವತಿಸಿಲ್ಲ. ಇದರಿಂದ  ಆಡಳಿತ ಮಂಡಳಿಗಳು ತೀವ್ರ ತೊಂದರೆಗೆ ಒಳಗಾ ಗುವಂತಾಗಿದೆ. ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಶಿಕ್ಷಕರು, ಚಾಲಕರು, ಆಯಾ ಗಳಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು. ಇಲ್ಲವಾದರೂ ಬಡ್ಡಿ ರಹಿತ ಸಾಲವಾ ದರೂ ನೀಡಿದರೆ  ಸಹಕಾರಿಯಾಗಲಿದೆ ಎಂದರು. ಈ ವೇಳೆ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆನ್ರಿ ಪ್ರಸನ್ನ ಕುಮಾರ್‌, ಖಜಾಂಚಿ ಆನಂದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next