Advertisement

ಸಿದ್ದು, ಡಿಕೆಶಿ ಎದುರೇ ಕಾರ್ಯಕರ್ತರ ಹೈಡ್ರಾಮಾ; ಕೋವಿಡ್ ನಿಯಮಕ್ಕಿಲ್ಲ ಬೆಲೆ

01:29 PM Aug 17, 2021 | Team Udayavani |

ರಾಯಚೂರು: ನಗರದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ವಿಭಾಗೀಯ ಸಭೆಗೆ ಆಗಮಿಸಿದ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎದುರು ಕಾರ್ಯಕರ್ತರು ಅತಿರೇಕದ ಅಭಿಮಾನ ತೋರುವ ಮೂಲಕ ಮುಖಂಡರಿಗೆ ಮುಜುಗುರ ಉಂಟು ಮಾಡಿದರು.

Advertisement

ಕಾಂಗ್ರೆಸ್ ಕಚೇರಿಗೆ ಮುಖಂಡರು ಬರುತ್ತಿದ್ದಂತೆ ಜಮಾಯಿಸಿದ ಕಾರ್ಯಕರ್ತರು ಕೋವಿಡ್ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ಘೋಷಣೆಗಳನ್ನು ಕೂಗಿದರು. ಜಿಲ್ಲಾ ಮುಖಂಡರಿಗೆ ಜೋರಾಗಿ ಘೋಷಣೆ ಕೂಗಿದ್ದಲ್ಲದೇ ಮುಖಂಡರನ್ನು ಮೇಲೆತ್ತಿ ಕುಣಿದು ಕುಪ್ಪಳಿಸಿದರು. ಇದರಿಂದ ರಾಜ್ಯಮಟ್ಟದ ನಾಯಕರಿಗೆ ಇರಿಸುಮುರಿಸು ಉಂಟಾಯಿತು.

ಇದನ್ನೂ ಓದಿ:ಕೋವಿಡ್ ನಿಂದ ಗುಣಮುಖರಾದವರು ಸ್ವಯಂಪ್ರೇರಿತರಾಗಿ ಕ್ಷಯ ರೋಗ ತಪಾಸಣೆ ಮಾಡಿಸಿ: ಡಾ.ಸುಧಾಕರ್

ಕೋವಿಡ್ 3ನೇ ಅಲೆ ನಿಯಂತ್ರಣದ ಬಗ್ಗೆ ಸರ್ಕಾರದ ವಿರುದ್ಧ ಟೀಕೆ ಮಾಡುವ ಕಾಂಗ್ರೆಸ್ ನಾಯಕರು ಮಾತ್ರ ಕೋವಿಡ್ ಬಗ್ಗೆ ಕಿಂಚಿತ್ತೂ ಯೋಚಿಸದಿರುವುದು ವಿಪರ್ಯಾಸ. ಬಹುತೇಕ ಕಾರ್ಯಕರ್ತರು ಮಾಸ್ಕ್ ಹಾಕಿರಲಿಲ್ಲ. ಅಲ್ಲದೇ, ಸುಮಾರು 10 ನಿಮಿಷಗಳ ಕಾಲ ಒಂದೇ ಸಮನೆ ಚೀರಾಟ ನಡೆಸಿದ್ದು ಕೂಡ ನೆರೆದವರ ಬೇಸರಕ್ಕೆ ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next