Advertisement

ಅಸಮಾಧಾನದ ಪ್ರಶ್ನೆ ಇಲ್ಲ: ಸಿ.ಟಿ.ರವಿ

11:26 PM Aug 26, 2019 | Lakshmi GovindaRaj |

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆಯಾಗು ತ್ತಿದ್ದಂತೆ ತಮಗೆ ಪ್ರಮುಖ ಖಾತೆ ನೀಡಿಲ್ಲ ಎಂದು ಹಲವು ಹಿರಿಯ ಸಚಿವರು ಅಸಮಾಧಾನಗೊಂಡಿದ್ದಾರೆ ಎಂಬ ಮಾತು ಕೇಳಿಬರಲಾರಂಭಿಸಿದೆ. ತಮ್ಮ ಹಿರಿತನ, ಅನುಭವಕ್ಕೆ ಅನುಗುಣವಾಗಿ ಸೂಕ್ತ ಖಾತೆ ನೀಡಿಲ್ಲ ಎಂದು ಅಸಮಾಧಾನ ಗೊಂಡವರ ಪೈಕಿ ಸಚಿವ ಸಿ.ಟಿ.ರವಿ ಅವರ ಹೆಸರು ಕೇಳಿಬಂದಿತ್ತು.

Advertisement

ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ.ರವಿ, ನಾನು ಸಚಿವ ಸ್ಥಾನ ಬಯಸಿರಲಿಲ್ಲ. ಇಂತಹದ್ದೇ ಖಾತೆ ನೀಡಿ ಎಂದೂ ಕೇಳಿರಲಿಲ್ಲ. ಹಾಗಾಗಿ ಅಸಮಾಧಾನದ ಪ್ರಶ್ನೆಯೇ ಇಲ್ಲ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಈಗಾಗಲೇ ಮೂರ್‍ನಾಲ್ಕು ಜವಾಬ್ದಾರಿಗಳನ್ನು ನೀಡಿದೆ. ಯಾರಿಗೂ ಸಿಗದ ಅವಕಾಶವನ್ನು ಒದಗಿಸಿಕೊಟ್ಟಿದೆ. ಅದರಲ್ಲೇ ನಾನು ತೃಪ್ತನಾಗಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next