Advertisement

BJP ಜತೆಗಿನ ಮೈತ್ರಿಯಲ್ಲಿ ತೊಂದರೆ ಇಲ್ಲ: ಎಐಎಡಿಎಂಕೆ

12:19 AM Sep 22, 2023 | Team Udayavani |

ಮಧುರೈ: “ಬಿಜೆಪಿಯೊಂದಿಗೆ ಚುನಾವಣ ಮೈತ್ರಿಯಲ್ಲಿ ಎಐಎಡಿಎಂಕೆಗೆ ಯಾವುದೇ ತೊಂದರೆ ಇಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಅವರು ಪುನಃ ಪ್ರಧಾನಿ ಆಗಬೇಕೆಂದು ಪಕ್ಷ ಬಯಸುತ್ತದೆ’ ಎಂದು ಎಐಎಡಿಎಂಕೆ ಹಿರಿಯ ನಾಯಕ ಸೆಲ್ಲೂರು ಕೆ.ರಾಜು ಹೇಳಿದ್ದಾರೆ.

Advertisement

ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ಹೇಳಿಕೆ ಹಿನ್ನೆಲೆಯಲ್ಲಿ ಮೈತ್ರಿ ಕಡಿದು ಕೊಳ್ಳ ಲಾಗಿದೆ ಎಂಬ ವರದಿಗಳ ನಡುವೆಯೇ ಹೊಸ ಹೇಳಿಕೆ ನೀಡಲಾಗಿದೆ. “ತಮಿಳುನಾಡು ಬಿಜೆಪಿ ಅಧ್ಯಕ್ಷರು ಎಐಎ ಡಿಎಂಕೆ ನಾಯಕ ದಿ| ಸಿ.ಎನ್‌.ಅಣ್ಣಾದೊರೈ ಅವ ರನ್ನು ಅವಮಾನಿಸುವುದನ್ನು ಪಕ್ಷ ಸಹಿಸುವುದಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, “ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ| ಸಿ.ಎನ್‌.ಅಣ್ಣಾದೊರೈ ಅವರನ್ನು ನಾನು ಅವಮಾನಿಸಿಲ್ಲ. ಆದರೆ 1956ರಲ್ಲಿ ನಡೆದ ಘಟನೆಯನ್ನು ಸ್ಮರಿಸಿದ್ದೇನೆ. ಇದೇ ಘಟನೆಯನ್ನು 1998ರಲ್ಲಿ ಅಂದಿನ ಸಿಎಂ ಕರುಣಾನಿಧಿ ಕೂಡ ನೆನಪಿಸಿದ್ದರು. ಈ ಕುರಿತು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next