Advertisement

ಉಚ್ಚಾಟನೆ ಅಧಿಕಾರ ತನಗಿಲ್ಲ: ಚುನಾವಣಾ ಆಯೋಗ

10:16 PM Apr 01, 2023 | Team Udayavani |

ನವದೆಹಲಿ: ಪಕ್ಷಾಂತರ ನಿಗ್ರಹ ಕಾನೂನಿನ ಅಡಿ ಅನರ್ಹಗೊಂಡ ಸಂಸದ ಅಥವಾ ಶಾಸಕ ಅದೇ ಸರ್ಕಾರದ ಅವಧಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅವರನ್ನು ಉಚ್ಚಾಟಿಸುವ ವಿಷಯದಲ್ಲಿ ಚುನಾವಣಾ ಆಯೋಗದ ಯಾವುದೇ ಪಾತ್ರ ಇರುವುದಿಲ್ಲ. ಈ ಬಗ್ಗೆ ನಿರ್ಣಯಿಸುವುದಕ್ಕೆ ಕೇಂದ್ರ ಸರ್ಕಾರ ಸೂಕ್ತ ಅಧಿಕಾರ ಹೊಂದಿದೆ ಎಂದು ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ಹೇಳಿದೆ.

Advertisement

ಅನರ್ಹ ಸಂಸದ, ಶಾಸಕರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಉಚ್ಚಾಟಿಸಬೇಕು ಎಂದು ಕೋರಿ ಕಾಂಗ್ರೆಸ್‌ ನಾಯಕ ಜಯ ಠಾಕೂರ್‌ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಇದರಲ್ಲಿ ಪ್ರತಿವಾದಿಗಳನ್ನಾಗಿಸಲಾಗಿತ್ತು. ವಿಚಾರಣೆ ವೇಳೆ ಈ ಕುರಿತು ಸ್ಪಷನೆ ನೀಡಿದ ಚುನಾವಣಾ ಆಯೋಗ, ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹ ಸಂಸದ, ಶಾಸಕರನ್ನು ಉಚ್ಚಾಟಿಸುವ ಅಧಿಕಾರ ತನಗಿಲ್ಲ ಎಂದು ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next