Advertisement

ಉಚಿತ ಕೊಡುಗೆ ಒಳ್ಳೆಯದೋ, ಕೆಟ್ಟದ್ದೋ ನಿರ್ಧರಿಸುವವರು ಮತದಾರರು

07:15 PM Apr 10, 2022 | Team Udayavani |

ನವದೆಹಲಿ:“ಉಚಿತ ಕೊಡುಗೆಗಳು ಒಳ್ಳೆಯದೋ, ಕೆಟ್ಟದೋ ಎಂಬುದನ್ನು ಮತದಾರರೇ ನಿರ್ಧರಿಸಬೇಕು’ ಎಂದು ಸುಪ್ರೀಂ ಕೋರ್ಟ್‌ಗೆ ಭಾರತೀಯ ಚುನಾವಣಾ ಆಯೋಗ ಹೇಳಿದೆ.

Advertisement

ಜತೆಗೆ, ಉಚಿತ ಕೊಡುಗೆಗಳನ್ನು ಘೋಷಿಸುವಂತಹ ರಾಜಕೀಯ ಪಕ್ಷಗಳ ಮಾನ್ಯತೆಯನ್ನು ರದ್ದು ಮಾಡಬೇಕು ಎಂಬ ಸಲಹೆಯನ್ನೂ ಆಯೋಗ ವಿರೋಧಿಸಿದೆ.

ಬಿಜೆಪಿ ನಾಯಕ ಅಶ್ವಿ‌ನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್‌ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಅದರಂತೆ, ಅಫಿಡವಿಟ್‌ ಸಲ್ಲಿಸಿರುವ ಆಯೋಗ, “ಉಚಿತ ಕೊಡುಗೆಗಳನ್ನು ನೀಡಬೇಕೋ, ಬೇಡವೋ, ಅವುಗಳನ್ನು ಚುನಾವಣೆಗೆ ಮುನ್ನ ನೀಡಬೇಕೋ, ನಂತರ ನೀಡಬೇಕೋ ಎನ್ನುವುದು ಆಯಾ ಪಕ್ಷಗಳಿಗೆ ಬಿಟ್ಟಿದ್ದು. ಇನ್ನು, ಅದು ಒಳ್ಳೆಯದೋ, ಕೆಟ್ಟದೋ, ಅದರಿಂದ ಅರ್ಥವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೋ ಎಂಬುದನ್ನು ನಿರ್ಧರಿಸಬೇಕಾದದ್ದು ಮತದಾರರು. ಈ ವಿಚಾರದಲ್ಲಿ ನಾವು ಯಾವ ನಿರ್ಧಾರಕ್ಕೂ ಬರಲು ಸಾಧ್ಯವಿಲ್ಲ’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next