Advertisement

ಭ್ರಷ್ಟಾಚಾರ ಆರೋಪವಿದ್ರೆ ಪಾಸ್‌ಪೋರ್ಟ್‌ ಸಿಗಲ್ಲ!

09:49 AM Mar 07, 2020 | Sriram |

ನವದೆಹಲಿ: ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಮಾನತುಗೊಂಡಿರುವ ಅಥವಾ ಕಾನೂನಿನ ಕ್ರಮಕ್ಕೆ ಗುರಿಯಾಗಿರುವ ಕೇಂದ್ರ ಸರ್ಕಾರಿ ಅಧಿಕಾರಿಗಳಿಗೆ ಪಾಸ್‌ಪೋರ್ಟ್‌ ಸೌಲಭ್ಯ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತಂತೆ, ಹೊಸ ನಿಯಮವೊಂದನ್ನು ಜಾರಿಗೆ ತರಲಾಗಿದ್ದು ಕೇಂದ್ರ ಸಿಬ್ಬಂದಿ ಇಲಾಖೆ, ಕೇಂದ್ರದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಿಗೆ ಈ ಕುರಿತಂತೆ ಪತ್ರ ಬರೆದಿದೆ.

Advertisement

ಇನ್ನು ಮುಂದೆ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಗಳು, ಪಾಸ್‌ಪೋರ್ಟ್‌ಗಾಗಿ ತಾವು ಸಲ್ಲಿಸುವ ಅರ್ಜಿಯ ಜೊತೆಗೆ ಕೇಂದ್ರ ಸರ್ಕಾರದ ವಿಚಕ್ಷಣಾ ದಳದಿಂದ ನಿರಾಕ್ಷೇಪಣಾ ಪತ್ರವೊಂದನ್ನು ಪಡೆದು ಅದನ್ನು ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯವಾಗಲಿದೆ. ಇದಲ್ಲದೆ, ಭ್ರಷ್ಟಾಚಾರ ಪ್ರಕರಣದಡಿ ಕಾನೂನಾತ್ಮಕ ಕ್ರಮಗಳನ್ನು ಎದುರಿಸುತ್ತಿರುವ ಕೇಂದ್ರದ ಯಾವುದೇ ಅಧಿಕಾರಿಯು ಸಲ್ಲಿಸುವ ಪಾಸ್‌ಪೋರ್ಟ್‌ ಅರ್ಜಿಯನ್ನು ಆತನಿಗೆ ಸಂಬಂಧಪಟ್ಟ ಇಲಾಖೆಯೇ ತಿರಸ್ಕರಿಸುವ ಅಧಿಕಾರವನ್ನು 1967ರ ಭಾರತೀಯ ಪಾಸ್‌ಪೋರ್ಟ್‌ ನಿಯಮಗಳಲ್ಲಿ ಉಲ್ಲೇಖೀಸಲಾಗಿದ್ದು, ಅದರ ಸದ್ಬಳಕೆ ಮಾಡಿಕೊಳ್ಳುವಂತೆ ಸಿಬ್ಬಂದಿ ಇಲಾಖೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next