Advertisement

ಮುಲಾಯಂ ಸಾರಥ್ಯಕ್ಕೆ ಒತ್ತಡ; ಎಸ್ಪಿಯಲ್ಲಿ ಮತ್ತೆ ಭಿನ್ನಮತ

09:44 AM Mar 13, 2017 | Team Udayavani |

ಲಕ್ನೋ: ಉತ್ತರಪ್ರದೇಶ ಚುನಾವಣೆಯಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷ ಹೀನಾಯ ಸೋಲು ಕಂಡ ನಂತರ ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆ ಸ್ಫೋಟಗೊಂಡಿದೆ. 

Advertisement

ಮುಲಾಯಂ ಸಿಂಗ್‌ ಯಾದವ್‌ ಅವರೇ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಂಡು, ಮತ್ತೆ ಗಟ್ಟಿಯಾಗಿ ಕಟ್ಟಿ ನಿಲ್ಲಿಸಬೇಕು ಎಂಬ ಕೂಗು ಜೋರಾಗುತ್ತಿದೆ. ಮುಲಾಯಂ ಮತ್ತು ಶಿವಪಾಲ್‌ ಅವರೊಂದಿಗೆ ಜಗಳವಾಡಿ, ಇಷ್ಟವಿಲ್ಲದೆ ಇದ್ದರೂ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಅಖೀಲೇಶ್‌ ಅವರು ಚುನಾವಣೆ ಎದುರಿಸಿದ್ದರು. ಆದರೆ, ಅಖೀಲೇಶ್‌ ಈ ಯತ್ನದಲ್ಲಿ ಸೋಲುಂಡಿರುವ ಕಾರಣ, ಕೂಡಲೇ ಅವರು ಪಕ್ಷದ ನಾಯಕತ್ವವನ್ನು ಬಿಟ್ಟುಕೊಟ್ಟು ತಂದೆಗೆ ಬೆಂಬಲವಾಗಿ ನಿಲ್ಲಬೇಕು. ಕೊಟ್ಟ ಅವಕಾಶವನ್ನು ಅಖೀಲೇಶ್‌ ಬಳಕೆ ಮಾಡಿಕೊಂಡು ಪಕ್ಷಕ್ಕೆ ಗೆಲವು ತಂದುಕೊಡುವಲ್ಲಿ ವಿಫ‌ಲವಾಗಿದ್ದಾರೆ. ಆದ್ದರಿಂದ ಇನ್ನು ಹೆಚ್ಚು ಸಮಯ ವಿಳಂಬ ಮಾಡಬಾರದು ಎಂಬ ಅಭಿಪ್ರಾಯ ಪಕ್ಷದೊಳಗೇ ಕೇಳಿಬರುತ್ತಿದೆ.

ಆದರೂ ಅಖೀಲೇಶ್‌ ಸಮರ್ಥಿಸಿಕೊಂಡ ಮುಲಾಯಂ!: ಇನ್ನೊಂದು ಕಡೆ, ಮಗನನ್ನು ಬಲವಾಗಿ ಸಮರ್ಥನೆ ಮಾಡಿ ಕೊಂಡಿರುವ ಮುಲಾಯಂ, ಸೋಲಿಗೆ ಯಾರೊಬ್ಬರನ್ನು ಹೊಣೆ ಮಾಡುವುದಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ನಾವು ಮತದಾರರನ್ನು ಒಲಿಸಿಕೊಳ್ಳುವಲ್ಲಿ ವಿಫ‌ಲವಾಗಿದ್ದೇವೆ. ಹೀಗಾಗಿ ಒಬ್ಬರನ್ನು ಹೊಣೆಮಾಡುವುದು ಎಂದಿಗೂ ಸರಿಯಾಗದು ಎಂದು ಹೇಳಿ ಮಗನ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ.

ಈ ನಡುವೆ ಮಹತ್ವದ ಬೆಳವಣಿಗೆಯಲ್ಲಿ ಅಖೀಲೇಶ್‌ ಚಿಕ್ಕಪ್ಪ ಶಿವಪಾಲ್‌ ಮಾತಾಡಿ, ನಾವು ಚುನಾವಣೆಯಲ್ಲಿ ಹೀನಾಯವಾಗಿ ಸೋತಿರಬಹುದು. ಆದರೆ ಮರಳಿ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ ಎಂದು ಭೀಷ್ಮ ಶಪಥ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next