Advertisement

ಈ ಬಾರಿಯ ಅಧಿವೇಶನದಲ್ಲಿ ಯಾವುದೇ ಹೊಸ ಬಿಲ್ ಮಂಡನೆ ಮಾಡಲ್ಲ: ರಾಜ್ಯ ಸರ್ಕಾರ

11:29 AM Feb 01, 2021 | Team Udayavani |

ಬೆಂಗಳೂರು: ಕುತೂಹಲಕ್ಕೆ ಕಾರಣವಾಗಿದ್ದ ಸದನ ಸಲಹಾ ಸಮಿತಿ ಸಭೆ ಮುಕ್ತಾಯವಾಗಿದೆ. ಈ ಬಾರಿ ವಿಧಾನ ಮಂಡಲ ಅಧಿವೇಶನದಲ್ಲಿ ಯಾವುದೇ ಹೊಸ ಬಿಲ್ ಮಂಡನೆ ಮಾಡದಿರಲು ಸಭೆಯಲ್ಲಿ ಸರ್ಕಾರ ಒಪ್ಪಿದೆ.

Advertisement

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಇವತ್ತಿನ ಸಭೆಯಲ್ಲಿ ಬಿಲ್ ಬಗ್ಗೆ ಚರ್ಚೆ ಮಾಡಿದ್ದೇವೆ. ಸಭೆಯಲ್ಲಿ ಚರ್ಚೆಯಾದ ಬಿಲ್ ಮಾತ್ರವೇ ಮಂಡನೆಯಾಗಬೇಕು ಎಂದಿದ್ದೇವೆ. ಇದಕ್ಕೆ ಸರ್ಕಾರ ಒಪ್ಪಿದೆ ಎಂದರು.

ಬೆಳಗಾವಿಯಲ್ಲಿ ಅಧಿವೇಶನ ಕರೆಯಲು ಒತ್ತಾಯ ಮಾಡಿದ್ದೇವೆ. ಮುಂದಿನ ಬಜೆಟ್ ಅಧಿವೇಶನ ಅಲ್ಲಿಯೇ ಮಾಡಬೇಕು ಎಂದ್ದಿದ್ದೇವೆ. ಉತ್ತರ ಕರ್ನಾಟಕ ಜನರಿಗೆ ಅನ್ಯಾಯ ಆಗುತ್ತಿದೆ. ಅವರ ಸಮಸ್ಯೆಗಳು ಚರ್ಚೆಯಾಗಬೇಕು. ಆದರೆ ಸರ್ಕಾರ ಬಜೆಟ್ ನಂತರದ ಅಧಿವೇಶನ ಮಾಡುತ್ತೇವೆ ಎಂದಿದೆ ಎಂದು ಹೇಳಿದರು.

ಕೇಂದ್ರ ಬಜೆಟ್ ಬಗ್ಗೆ ಮಾತನಾಡಿದ ಅವರು, ಕೇಂದ್ರ ಬಜೆಟ್ ನಲ್ಲಿ ನಮ್ಮ ನಿರೀಕ್ಷೆ ಈಡೇರಿಲ್ಲ. ಕೋವಿಡ್ ಸಮಯದಲ್ಲಿ ನೀಡಿದ ಭರವಸೆ ಈಡೇರಿಲ್ಲ. ಯುವಕರ ನಿರೀಕ್ಷೆಯೂ ಕೈಗೂಡಿಲ್ಲ. ಇದು ಈವರೆಗಿನ ಮಾಹಿತಿ, ಉಳಿದ ಮಾಹಿತಿ ಬಜೆಟ್ ನಂತರ ಹೇಳುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next