Advertisement
ರಾಜಧಾನಿ ಬೆಂಗಳೂರು ಸಹಿತ ಹಳೇ ಮೈಸೂರು ಭಾಗದಲ್ಲಿ ಶನಿವಾರ ವರುಣನ ಅಬ್ಬರ ಬಿರುಸಾಗಿತ್ತು. ಹಾಸನ ನಗರ ಮತ್ತು ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು, ಮುಂಗಾರು ಮಳೆ ಆಶಾದಾಯಕವಾಗುವ ಮುನ್ಸೂಚನೆ ನೀಡಿದೆ.
Related Articles
Advertisement
ಇಂದು ಹಲವೆಡೆ ಮಳೆ ಸಾಧ್ಯತೆರವಿವಾರದಿಂದ ರಾಜ್ಯದ ಕೆಲವು ಕಡೆಗಳಲ್ಲಿ ಮುಂಗಾರು ಮಳೆ ಸುರಿಯುವ ಸಾಧ್ಯತೆಗಳಿದ್ದು, ಮುಂದಿನ 2-3 ದಿನಗಳಲ್ಲಿ ನೈಋತ್ಯ ಮಾನ್ಸೂನ್ ಪೂರ್ಣ ಪ್ರಮಾಣದಲ್ಲಿ ಕರ್ನಾಟಕವನ್ನು ಪ್ರವೇಶಿಸುವ ಅನುಕೂಲಕರ ಪರಿಸ್ಥಿತಿಗಳು ನಿರ್ಮಾಣಗೊಂಡಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಡಿಕೆಗಿಂತ ಮೊದಲೇ ಪ್ರವೇಶ
ಈ ಬಾರಿ ಜೂನ್ ಮೊದಲ ವಾರವೇ ಮುಂಗಾರು ಪ್ರವೇಶಿಸಲಿದೆ. ವಾಡಿಕೆಗಿಂತ ಬೇಗ ಮಳೆಗಾಲ ಬಂದರೆ ಆ ವರ್ಷಗಳಲ್ಲಿ ಅತ್ಯಧಿಕ ಮಳೆಯನ್ನು ನಿರೀಕ್ಷಿಸಬಹುದಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.