Advertisement

Politics; ಇನ್ನು ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಪ್ರಮೋದ್‌ ಮುತಾಲಿಕ್‌

12:37 AM Jan 30, 2024 | Team Udayavani |

ಬಾಗಲಕೋಟೆ: ನಾನು ರಾಜಕೀಯದ ಬಾಗಿಲನ್ನು ಮುಚ್ಚಿದ್ದೇನೆ. ಇನ್ನು ಮುಂದೆ ಯಾವುದೇ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ಆದರೆ ಶ್ರೀರಾಮ ಸೇನೆಯಿಂದ “ಮೋದಿ ಗೆಲ್ಲಿಸಿ, ಭಾರತ ಉಳಿಸಿ’ ಎಂಬ ಅಭಿಯಾನ ಆರಂಭಿಸಿದ್ದೇವೆ. ಚಿಕ್ಕೋಡಿಯಿಂದ ಈ ಅಭಿಯಾನ ಆರಂಭಗೊಂಡಿದ್ದು, ಎಲ್ಲ ಲೋಕಸಭಾ ಕ್ಷೇತ್ರಗಳಲ್ಲೂ ಅಭಿಯಾನ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಕೇಸರಿ ಕಂಡರೆ ಆಗುವುದಿಲ್ಲ. ಕೇಸರಿ, ಯಾವುದೇ ಜಾತಿ, ಪಕ್ಷ, ಧರ್ಮಕ್ಕೆ ಸೀವಿುತವಲ್ಲ. ಅದು ದೇಶದ ಸಮಸ್ತ ಹಿಂದೂಗಳಿಗೆ ಸೇರಿದ್ದು. ಇಂತಹ ಕೇಸರಿ ಧ್ವಜವನ್ನು ಕಿತ್ತು ಹಾಕಿದ ಸರಕಾರದ ಕ್ರಮ ಖಂಡನೀಯ.

ಇಡೀ ದೇಶದಲ್ಲಿ ಶ್ರೀರಾಮನ ಸುನಾಮಿ ಎದ್ದಿದೆ. ಹಳ್ಳಿಹಳ್ಳಿಗಳಲ್ಲಿ ಆ ವೈಭವ ನೋಡಲಾಗದೇ ಹೊಟ್ಟೆ ಉರಿಯುತ್ತಿದೆ. ಮಂಡ್ಯ ಜಿಲ್ಲೆ ಕೆರಗೋಡದಲ್ಲಿ ಯಾವುದೇ ವಿವಾದ ಇಲ್ಲದಿದ್ದರೂ ಕೇಸರಿ ಧ್ವಜವನ್ನು ತೆರವುಗೊಳಿಸಿದ್ದಾರೆ. ಕೂಡಲೇ ಅದನ್ನು ಪುನಃ ಅದೇ ಜಾಗದಲ್ಲಿ ಹಾರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next