Advertisement

ವಿಜಯಪುರದಲ್ಲಿ ಲಾಕ್ ಡೌನ್ ಮಾಡಲಾಗುವುದಿಲ್ಲ; ಗೋವಿಂದ ಕಾರಜೋಳ

03:31 PM Jul 13, 2020 | keerthan |

ವಿಜಯಪುರ: ವಿಜಯಪುರ ಜಿಲ್ಲೆಯು ಕೋವಿಡ್ ರೆಡ್ ಝೋನ್ ನಿಂದ ಹೊರಗೆ ಇರುವ ಕಾರಣ ಲಾಕ್ ಡೌನ್ ಅಗತ್ಯವಿಲ್ಲ ಡಿಸಿಎಂ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.

Advertisement

ಭುರಣಾಪೂರ ಬಳಿ ಉದ್ದೇಶಿತ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಸ್ಥಳ ಪರಿಶೀಲನೆ ಬಳಿಕ ಪತ್ರಕರ್ತರಿಗೆ ಈ ವಿಷಯ ತಿಳಿಸಿದ ಅವರು,ವಿಜಯಪುರ‌ ರೆಡ್ ಝೋನನಲ್ಲಿ ಇಲ್ಲ. ಹೀಗಾಗಿ ಲಾಕ್ ಡೌನ್ ಮಾಡುವುದಿಲ್ಲ‌ ಎಂದರು.

ಕೋವಿಡ್-19 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ಪ್ರದೇಶ, ವಾರ್ಡ್ ಮಾತ್ರ ಲಾಕ್ ಡೌನ್ ಮಾಡಲಾಗುತ್ತದೆ ಎಂದರು.  ಕೋವಿಡ್ ರೋಗದ ಕುರಿತು ಜನರು ಭಯ ಪಡದೇ, ಕೋವಿಡ್ ರೋಗದೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳಬೇಕಿದೆ ಎಂದರು.

ಈ ಕುರಿತು ಚರ್ಚಿಸಲು ಇಂದು ಸಂಜೆಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಡಿಯೋ ಸಂವಾದ ಸಭೆ ಕರೆದಿದ್ದು, ನಾವೆಲ್ಲರೂ ನಾನೂ ಅದರಲ್ಲಿ ಪಾಲ್ಗೊಳ್ಳಲಿದ್ದೇನೆ. ಜಿಲ್ಲಾಧಿಕಾರಿ ವರದಿ ಆಧಾರಿಸಿ ಮುಖ್ಯಮಂತ್ರಿ ಲಾಕ್ ಡೌನ್ ಮಾಡುವ ಕುರಿತು ನಿರ್ಧರಿಸಲಿದ್ದಾರೆ.

ಇದರ ಹೊರತಾಗಿಯೂ ಸರ್ಕಾರ‌ ಲಾಕ್ ಡೌನ್ ಮಾಡುವ ಕುರಿತು ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ ಎಂದೂ ಸಮಜಾಯಿಷಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next