Advertisement

ಲೈಸೆನ್ಸ್‌ ಇಲ್ಲ, ಆದರೂ ಬಸ್‌ ಓಡಿಸುವೆ: ರೇಣುಕಾಚಾರ್ಯ

11:48 PM Jan 08, 2020 | Team Udayavani |

ದಾವಣಗೆರೆ: “ಯಾವ ಡೀಸಿ, (ಕೆಎಸ್‌ಆರ್‌ಟಿಸಿ) ನೋಟಿಸ್‌ಗೂ ನಾನು ಕೇರ್‌ ಮಾಡಲ್ಲ. ನನಗೆ ಆತ್ಮವಿಶ್ವಾಸ ಇದೆ. ಅದೇ ಕಾರಣಕ್ಕೆ ಬಸ್‌ ಓಡಿಸಿದ್ದೇನೆ’ ಎಂದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಚಾಲನೆ ಮಾಡಿದ್ದಕ್ಕೆ ಸಂಸ್ಥೆ ಅಧಿಕಾರಿ ನೋಟಿಸ್‌ ನೀಡಿದ್ದಾರೆ. ನನ್ನ ಬಳಿ ಭಾರೀ ವಾಹನ ಚಾಲನೆ ಪರವಾನಗಿ ಇಲ್ಲ. ಮೋಟಾರ್‌ ಬೈಕ್‌, ಕಾರು ಲೈಸೆನ್ಸ್‌ ಜತೆಗೆ ಆತ್ಮವಿಶ್ವಾಸವಿದೆ. ನಾನು ಗಾಡಿ ತೆಗೆದುಕೊಂಡು ಹೋದ್ರೆ ನನ್ನ ಪ್ರಾಣವೇ ಮೊದಲು ಹೋಗುತ್ತದೆ. ಮುಂದಿನ ದಿನಗಳಲ್ಲಿ ವಿವಿಧ ಹಳ್ಳಿಗಳಿಗೆ 15 ಬಸ್‌ ಸಂಚಾರ ಕಲ್ಪಿಸಲು ಕ್ರಮ ಕೈಗೊಳ್ಳುವೆ. ಆಗ ನಾನೇ ಚಾಲನೆ ಮಾಡಿಕೊಂಡು ಹೋಗುವೆ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next