Advertisement

ಸಿಇಒ ನೇಮಕಾತಿಯಿಲ್ಲ: ಟಾಟಾ ಸನ್ಸ್‌ ಸ್ಪಷ್ಟನೆ

08:49 PM Sep 15, 2021 | Team Udayavani |

ನವದೆಹಲಿ: ಟಾಟಾ ಸನ್ಸ್‌ ಸಂಸ್ಥೆಯಲ್ಲಿ ಸಿಇಒ ನೇಮಕ ಮಾಡಿಕೊಳ್ಳಲಾಗುವುದು, ಆಡಳಿತ ವರ್ಗದಲ್ಲಿ ಬದಲಾವಣೆ ತರಲಾಗುವುದು ಎನ್ನುವ ಸುದ್ದಿ ಹರಿದಾಡಿದ್ದರ ಬಗ್ಗೆ ಸಂಸ್ಥೆಯ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಮತ್ತು ಮುಖ್ಯಸ್ಥ ರತನ್ ಟಾಟಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಸಂಸ್ಥೆಯ ಆಡಳಿತ ನವೀಕರಣದ ಬಗ್ಗೆ ಯಾವುದೇ ಚರ್ಚೆಯೂ ನಡೆದಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

“ಈ ರೀತಿಯ ಸುದ್ದಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗೆಳ ಬೆಳವಣಿಗೆಗೆ ಅಡ್ಡಿ ತರುತ್ತವಷ್ಟೇ. ಈ ರೀತಿ ಸುಳ್ಳು ಸುದ್ದಿ ಹರಿದಾಡಿದ್ದರ ಬಗ್ಗೆ ಬೇಸರವಾಗಿದೆ ’ ಎಂದು ರತನ್‌ ಟಾಟಾ ತಿಳಿಸಿದ್ದಾರೆ.

ಇದನ್ನೂ ಓದಿ:ಮುಂಬರುವ ಚುನಾವಣೆಗೆ ಬಿಜೆಪಿ ಸಿದ್ದವಾಗಿದೆ : ಕಂದಾಯ ಸಚಿವ ಆರ್ ಅಶೋಕ್

“ಅಂತಹ ನಿರ್ಧಾರಗಳನ್ನು ಸಂಸ್ಥೆಯ ಸಮಿತಿ ತೆಗೆದುಕೊಳ್ಳುತ್ತದೆ. ಈಗ ಆ ರೀತಿಯ ಯಾವುದೇ ಚರ್ಚೆ ನಡೆದಿಲ್ಲ. ಈ ಸುಳ್ಳು ಸುದ್ದಿ ನಮಗೆ ನಿರಾಶೇ ತಂದಿದೆ’ ಎಂದು ಚಂದ್ರಶೇಖರನ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next