Advertisement

ದೇಶದ್ರೋಹಿ ಕೃತ್ಯಕ್ಕೆ ಸಮರ್ಥನೆ ಸಲ್ಲದು: ಸ್ಪೀಕರ್‌ ಖಾದರ್‌

07:32 PM Mar 03, 2024 | Team Udayavani |

ಬೆಳಗಾವಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದವರು ದೇಶದ್ರೋಹಿಗಳು. ಇಂಥವರಿಗೆ ಕಠಿನ ಶಿಕ್ಷೆ ಆಗಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥ ದೇಶದ್ರೋಹಿ ಕೃತ್ಯಗಳು, ಬಾಂಬ್‌ ಸ್ಫೋಟ ಮಾಡಿದವರನ್ನು ಮಟ್ಟ ಹಾಕಬೇಕು. ಮುಂದೆ ಇಂಥ ಕೃತ್ಯ ಎಸಗಲು ಬೇರೆಯವರೂ ಭಯಪಡುವಂತೆ ಕಠಿನ ಶಿಕ್ಷೆ ವಿಧಿಸಬೇಕು.

ಶಾಂತಿಯುತ ರಾಜ್ಯದ ಹೆಸರು ಕೆಡಿಸುವವರನ್ನು ಮಟ್ಟ ಹಾಕಬೇಕು. ಮನುಷ್ಯತ್ವ ಇಲ್ಲದವರನ್ನು ನಾವು ಯಾರೂ ಸಮರ್ಥಿಸಿಕೊಳ್ಳಬಾರದು. ಈ ಕೃತ್ಯದ ಹಿಂದೆ ಯಾರಿದ್ದಾರೆ, ಅವರ ಉದ್ದೇಶ ಏನು ಎಂಬುದು ಗೊತ್ತಾಗಬೇಕು. ಇಂಥ ಸಂದರ್ಭದಲ್ಲಿ ಯಾರೂ ರಾಜಕಾರಣ ಮಾಡಬಾರದು. ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು. ಒಗ್ಗಟ್ಟಿನಿಂದ ಇಂಥ ಕೃತ್ಯಗಳನ್ನು ತಡೆಯಲು ಸಾಧ್ಯ. ನಮ್ಮ ನಮ್ಮಲ್ಲಿಯೇ ಭಿನ್ನಾಭಿಪ್ರಾಯಗಳಿದ್ದರೆ ದುಷ್ಕರ್ಮಿಗಳು ಇದರ ಲಾಭ ಪಡೆದುಕೊಳ್ಳುವುದು ಸಹಜ. ಸೌಹಾರ್ದದಿಂದ ಇದ್ದರೆ ನಮ್ಮನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next