Advertisement

ಕೋವಿಡ್‌ ಭೀತಿ: ಹೊಸ ವರ್ಷದಂದು ಸುರಸದ್ಮಗಿರಿ ಬೆಟ್ಟಕ್ಕೆ ಪ್ರವೇಶ ನಿಷೇಧ

02:06 PM Dec 28, 2022 | Team Udayavani |

ಗುಡಿಬಂಡೆ: ಬೆಂಗಳೂರಿನ ಕೂಗಳತೆಯ ದೂರದಲ್ಲಿರುವ ಪ್ರವಾಸಿ ತಾಣವಾದ ಗುಡಿಬಂಡೆ ಪಟ್ಟಣದ ಸುರಸದ್ಮಗಿರಿ ಬೆಟ್ಟಕ್ಕೆ ಡಿ. 31 ರ ರಾತ್ರಿಯಿಂದ ಜನವರಿ 2 ರ ಬೆಳಗಿನವರೆಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರವೇಶ ನಿಷೇಧಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಬಾ ಶಿರೀನ್ ತಿಳಿಸಿದ್ದಾರೆ.

Advertisement

ದೇಶದಲ್ಲಿ ಕೊರೋನ ತನ್ನ ಆರ್ಭಟವನ್ನು ಮುಂದುವರೆಸಿದ್ದು, ಇದರಿಂದ ರಾಜ್ಯ ಸರ್ಕಾರ ಈಗಾಗಲೇ ಹೊಸ ವರ್ಷ ಆಚರಣೆಯಲ್ಲಿ ಕೆಲವು ನಿಬಂಧನೆಗಳನ್ನು ಜಾರಿಗೆ ತಂದು, ಮುನ್ನೆಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶ ಮಾಡಿದೆ

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎಂ.ಎನ್.ನಾಗರಾಜ್ ರವರು ಗುಡಿಬಂಡೆ ತಾಲೂಕಿನ ಸುಪ್ರಸಿದ್ದ ಇತಿಹಾಸವುಳ್ಳ ಸುರಸದ್ಮಗಿರಿ ಬೆಟ್ಟಕ್ಕೆ ನಿಷೇದ ಹೇರಿದ್ದು, ಹೊಸ ವರ್ಷ ವಾರಾಂತ್ಯದಲ್ಲಿ ಬಂದಿರುವುದರಿಂದ ಪ್ರವಾಸಿಗಳ ಸಂಖ್ಯೆಯು ಸಹ ಹೆಚ್ಚಳವಾಗುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಡಿ.31 ರ ರಾತ್ರಿಯಿಂದ ಜನವರಿ 2 ರ ಬೆಳಗಿನ ವರೆಗೂ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next