ಮಕ್ಳು ಪಟಾಕಿ ಕೇಳಿದ್ರೆ ಕರುಳ್ ಕಿತ್ತು ಬರ್ತಾತೆ. ಹಿಂಗೆ ಇರೋವಾಗ ಎಲ್ಲಿ ದೀಪಾವಳಿ, ಹಬ್ಬನೂ-ಗಿಬ್ಬನೂ ಇಲ್ಲ….
Advertisement
ಇದು, ಕಳೆದ ಸೆ. 24ರಂದು ಸುರಿದ ಭಾರೀ ಮಳೆಯಿಂದ ತೊಟ್ಟ ಬಟ್ಟೆ ಬಿಟ್ಟರೆ ಬೇರೆ ಎಲ್ಲವನ್ನೂ ಕಳೆದುಕೊಂಡು ಹೈಟೆಕ್ ಜಾನುವಾರು ಮಾರುಕಟ್ಟೆಯಲ್ಲಿರುವ ಚಿಕ್ಕನಹಳ್ಳಿ ಬಡಾವಣೆಯ ಗೀತಾ, ತುಳಸಿಬಾಯಿ, ಲಕ್ಷ್ಮಮ್ಮ, ಶಂಕರಮ್ಮ… ಇತರರ ಅಳಲು. ಮಹಾಮಳೆಯ ಆರ್ಭಟದಿಂದ ಬಡಾವಣೆಯ ಪಕ್ಕದಲ್ಲೇ ಇರುವ ಎರಡೂ ಹಳ್ಳಗಳು ತುಂಬಿ ಸರಿ ರಾತ್ರಿಯಲ್ಲಿ ತಾತ್ಕಾಲಿಕ ಶೆಡ್ಗಳಿಗೆ ನೀರು ನುಗ್ಗಿದ ಪರಿಣಾಮ ಎಲ್ಲವನ್ನೂ ಕಳೆದುಕೊಂಡಿರುವ ಚಿಕ್ಕನಹಳ್ಳಿಯ 263ಕ್ಕೂ ಹೆಚ್ಚು ಕುಟುಂಬಗಳು ಬೆಳಕಿನಹಬ್ಬ ದೀಪಾವಳಿಯ ಸಂಭ್ರಮವೇ ಇಲ್ಲ. ಮತ್ತೆ ಮತ್ತೆ ಸುರಿದ ಮಳೆ ದಸರಾ ಈಗ ದೀಪಾವಳಿಯ ಸಂಭ್ರಮವನ್ನೇ ಕಿತ್ತುಕೊಂಡಿದೆ.
ಮುಂದುವರೆಯಿತು. ಪ್ರಾರಂಭಿಕ ಹಂತದಲ್ಲಿ ಸಂತ್ರಸ್ತರಿಗೆ ನೀಡಲಾಗುತ್ತಿದ್ದ ಸೌಲಭ್ಯ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದಂತೆ ಒಂದೊಂದೆ ಕಾಣೆಯಾದವು. ಈಗ ಬಡಾವಣೆಗಳ ಸ್ಥಿತಿ ಅಕ್ಷರಶಃ ಅತಂತ್ರ. ಒಂದು ಕಡೆ ಮನೆ ಇಲ್ಲ. ಇರುವ ಮನೆಯಲ್ಲಾದರೂ ಒಂದೊತ್ತಿನ ಗಂಜಿ ಮಾಡಿಕೊಂಡಾದರೂ ಜೀವನ ನಡೆಸೋಣ ಅಂದುಕೊಂಡರೆ ಮನೆಯ ತುಂಬೆಲ್ಲ ಕೆಸರು. ಕಾಲಿಡಲಿಕ್ಕೂ ಆಗದಷ್ಟು ಕೆಸರು ತುಂಬಿ ಕೊಂಡಿರುವುದರಿಂದ ತಮ್ಮದೂ ಎನ್ನುವ ಮನೆಯ ಮುಂದೆ ಅಡುಗೆ ಮಾಡಿಕೊಂಡು, ಊಟ ಮಾಡಿ, ಹೈಟೆಕ್ ಜಾನುವಾರು ಮಾರುಕಟ್ಟೆಯಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಹೈಟೆಕ್ ಜಾನುವಾರು ಮಾರುಕಟ್ಟೆಯಲ್ಲಿ ಮೊದಲಿಗೆ ಇದ್ದಂತಹ ತಾತ್ಕಾಲಿಕ ವಿದ್ಯುತ್ ಈಗ ಇಲ್ಲ. ಹಾಗಾಗಿ ಇಡೀ ರಾತ್ರಿಯನ್ನು ಕತ್ತಲೆಲ್ಲೇ ಕಳೆಯಬೇಕಾಗಿದೆ. ಕರೆಂಟ್ ಮಾತ್ರವಲ್ಲ ಇಲ್ಲಿ ಕುಡಿಯಲಿಕ್ಕೆ ಒಂದು
ಹನಿ ನೀರು ಸಹ ಸಿಗುವುದೇ ಇಲ್ಲ ಎನ್ನುತ್ತಾರೆ ನಾಲ್ಕು ತಿಂಗಳ ಬಾಣಂತಿ ಗೀತಾ.
Related Articles
Advertisement
ನಾವು ಬಡವರಾಗಿ ಹುಟ್ಟಿದ್ದೇ ತಪ್ಪಾಗೈತೆ. ಏನೋ ಕೂಲಿ-ನಾಲಿ ಮಾಡ್ಕೊಂಡು ಜೀವನ ನಡೆಸ್ತಾ ಇದ್ವಿ. ಮಳೆ ಬಂದು ಎಲ್ಲ ಕಿತ್ಕೊಂಡು ಹೊಯ್ತು. ಮನೆ ಇಲ್ಲ, ಮಠ ಇಲ್ಲ. ಇರೋ ಒಬ್ಬಳು ಮಗಳ ಜೊತೆ ಎಲ್ಲಿ ಇರಬೇಕೋ ಅನ್ನೋದೆ ಗೊತ್ತಾಗ್ತಾ ಇಲ್ಲ…. ಎಂದು ಲಕ್ಷ್ಮಮ್ಮ ನಿಟ್ಟಿಸಿರು ಬಿಡುತ್ತಾರೆ. ಬಡಾವಣೆಯ ಜನರಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಕಷ್ಟ ತಾತ್ಕಾಲಿಕ ಆಶ್ರಯಕ್ಕೂ ಸಂಚಕಾರ…